ಬೆಂಗಳೂರು: ಮಾದಕ ವಸ್ತು ಜಾಲದಲ್ಲಿ ಖ್ಯಾತ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ, ಐಂದ್ರಿತಾ ರೈ ಹಾಗೂ ನಟ ದಿಗಂತ್ ವಿಚಾರಣೆ ಬಳಿಕ ಮತ್ತಷ್ಟು ಸ್ಟಾರ್ ನಟರಿಗೂ ಉರುಳು ಸುತ್ತಿಕೊಳ್ಳಲಾರಂಭಿಸಿದೆ. ಡ್ರಗ್ಸ್ ಪೆಡ್ಲರ್ನ ಜೊತೆಗಿನ ಸಂಪರ್ಕಕ್ಕಾಗಿ ನಟ ಯೋಗಿ, ಕ್ರಿಕೆಟಿಗ ಅಯ್ಯಪ್ಪ, ಕಿರುತೆರೆ ನಟಿ ರಶ್ಮಿತಾ ವಿಚಾರಣೆ ನಡೆದಿದೆ ಎನ್ನಲಾಗುತ್ತಿದೆ.
ಬ್ರಹ್ಮಗಂಟು ಸೀರಿಯಲ್ನ ಗೀತಾ ಭಟ್, ಗಟ್ಟಿಮೇಳದ ಅಭಿಷೇಕ್ಗೆ ಸಮನ್ಸ್ ದೊರಕಿದ್ದು ಬಿಜೆಪಿ ಸಂಸದರ ಪುತ್ರ, ಜೆಡಿಎಸ್ನ ಶಿವರಾಮೇಗೌಡ ಪುತ್ರನಿಗೆ ನೊಟೀಸ್ ನೀಡಲಾಗಿದೆ. 12ಕ್ಕೂ ಹೆಚ್ಚು ‘ವಿಐಪಿ ಕುಳ’ಗಳಿಗೆ ಆಂತರಿಕ ಭದ್ರತಾ ವಿಭಾಗದ ತನಿಖೆಯಾ ಭೀತಿಎದುರಿಸುತ್ತಿವೆ.
ರಾಜ್ಯದಲ್ಲಿ ಬೇರೂರಿರುವ ಮಾದಕ ವಸ್ತು ಮಾರಾಟ ಜಾಲದ ವಿರುದ್ಧ ಸಿಸಿಬಿ, ಎನ್ಸಿಬಿ ಬಳಿಕ ಇದೀಗ ಆಂತರಿಕ ಭದ್ರತಾ ವಿಭಾಗ (ಐಎಸ್ಡಿ) ಕಾರ್ಯಾಚರಣೆ ಆರಂಭಿಸಿದ್ದು, ಖ್ಯಾತ ನಟ ಯೋಗೇಶ್ ಹಾಗೂ ನಟಿ ಪ್ರೇಮಾ ಸೋದರ, ಕ್ರಿಕೆಟಿಗ ಎನ್.ಸಿ.ಅಯ್ಯಪ್ಪ, ಕಿರುತೆರೆ ನಟಿ ರಶ್ಮಿತಾ ಚಂಗಪ್ಪ ಸೇರಿದಂತೆ 12ಕ್ಕೂ ಹೆಚ್ಚಿನ ‘ವಿಐಪಿ’ ಕುಳಗಳಿಗೆ ಐಎಸ್ಡಿ ತನಿಖೆಯ ಬಿಸಿ ತಾಗಿದೆ.
ಪೆಡ್ಲರ್ಗಳೊಂದಿಗೆ ಒಡನಾಟ ಹೊಂದಿದ್ದ ರಶ್ಮಿತಾ, ಯೋಗಿ, ಅಯ್ಯಪ್ಪ ಜತೆ ಖಾಸಗಿ ಉದ್ಯೋಗಿ ನಿಶ್ಚಿತಾ ಸಹ ಆತ್ಮೀಯವಾಗಿದ್ದಳು. ಅಲ್ಲದೆ ಪೆಡ್ಲರ್ ವಿಚಾರಣೆ ವೇಳೆ ನಿಶ್ಚಿತಾ ಹೆಸರು ಸಹ ಪ್ರಸ್ತಾಪವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.