ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ವಿಚಾರ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ ನಟಿ ನಿವೇದಿತಾ ವಿರುದ್ಧ ಎಫ್ಐಆರ್ ದಾಖಲಾಗಿದೆ. ಗಾಂಜಾ ಎನ್ನುವುದು ತುಳಸಿಯಷ್ಟೇ ಪವಿತ್ರ ಎಂದು ಮಾದ್ಯಮಗಳೆದುರು ಹೇಳಿಕೆ ನೀಡಿದ್ದ ನಟಿಯ ವಿರುದ್ಧ ಮಲ್ಲೇಶ್ವರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೆ. 1ರಂದು ಚಿತ್ರೋದ್ಯಮದಲ್ಲಿ ಡ್ರಗ್ಸ್ ವಿಚಾರವಾಗಿ ಮಾದ್ಯಮದೊಡನೆ ಮಾತನಾಡಿದ್ದ ನಟಿ ನಿವೇದಿತಾ ” ತುಳಸಿ ಗಿಡದಷ್ಟೇ ಗಾಂಜಾ ಗಿಡವು ಶ್ರೇಷ್ಟ ಎಂಬುದಾಗಿ ಗಾಂಜಾ ಸೇವನೆಯ ಬಗ್ಗೆ ಉತ್ತೇಜನ ನೀಡಿದಂತ ವೀಡಿಯೋವೊಂದು ಎಲ್ಲಾ ಕಡೆ ವೈರಲ್ ಆಗಿತ್ತು. ಇಂತಹ ಗಾಂಜಾ ಸೇವನೆಗೆ ಉತ್ತೇಜನ ನೀಡಿದಂತ ವೀಡಿಯೋ ತುಣುಕಿನ ಆಧಾರ ಮೇಲೆ ಕ್ರಮ ಕೈಗೊಳ್ಳುವಂತೆ ಎ.ದೀಪಕ್ ಎಂಬುವರು ಪೊಲೀಸರಿಗೆ ದೂರು ನೀಡಿದ್ದರು.
ಎ ದೀಪಕ್ ಎಂಬುವವರ ದೂರನನ್ನು ಆಧರಿಸಿ, ಇದೀಗ ಪೊಲೀಸರು ಚಿತ್ರನಟಿ ನಿವೇದಿತಾ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದಾರೆ. ಈ ಮೂಲಕ ಚಿತ್ರನಟಿ ನಿವೇದಿತಾಗೆ ಬಂಧನದ ಭೀತಿ ಶುರುವಾಗಿದೆ.