ಬಿಡದಿ : ಸದಾ ವಿವಾದಗಳಿಂದಲೇ ಸುದ್ದಿಯಲ್ಲಿರುವ ನಿತ್ಯಾನಂದ ಸ್ವಾಮೀಜಿ, ಈಗ ‘ರಿಸರ್ವ್ ಬ್ಯಾಂಕ್ ಆಫ್ ಕೈಲಾಶ್’ ಜತಗೆ ತನ್ನದೇ ಭಾವಚಿತ್ರವಿರುವ ಕರೆನ್ಸಿಯನ್ನು ಸಹ ಇನ್ನು 4 ದಿನದೊಳಗಾಗಿ ಸ್ಥಾಪನೆ ಮಾಡುವುದಾಗಿ ಹೇಳಿಕೊಂಡಿದ್ದಾನೆ.
ಈ ಬಗ್ಗೆ ಸುಮಾರು 2.43 ನಿಮಿಷಗಳ ವಿಡಿಯೋವನ್ನು ಬಿಡುಗಡೆ ಮಾಡಿರುವ ನಿತ್ಯಾನಂದ, ಗಣೇಶ ಹಬ್ಬದ ಅಂಗವಾಗಿ ನೂತನ ಬ್ಯಾಂಕ್ ಅನ್ನು ಸ್ಥಾಪನೆ ಮಾಡಲಾಗುವುದು. ರಿಸರ್ವ್ ಬ್ಯಾಂಕ್ ಆಫ್ ಕೈಲಾಶ್ ಎಂಬ ಹೆಸರಿನೊಂದಿಗೆ ಇದು ಆರ್ಥಿಕತೆಗೆ ಸಹಾಯಕವಾಗಲಿದೆ ಎಂದಿದ್ದಾನೆ.
ಇದಕ್ಕಾಗಿ 300 ಪುಟಗಳ ಆರ್ಥಿಕತೆಯ ದಾಖಲೆಗಳನ್ನು ಸಿದ್ದಪಡಿಸಲಾಗಿದೆ. ಆಂತರಿಕ ಹಾಗೂ ಬಾಹ್ಯ ಆಂತರಿಕತೆಯ ಎಲ್ಲವೂ ಕಾನೂನು ಬದ್ದವಾಗಿಯೇ ಇದೆ. ವ್ಯಾಟಿಕನ್ ಬ್ಯಾಂಕ್ ಮಾದರಿಯಲ್ಲಿ ಬ್ಯಾಂಕ್ ಆಫ್ ಕೈಲಾಶ್ ಕಾರ್ಯನಿರ್ವಹಿಸಲಿದೆ ಎಂದಿದ್ದಾನೆ.
ಒಟ್ಟು 2 ಉದ್ದೇಶಗಳಿಗಾಗಿ ಈ ಬ್ಯಾಂಕ್ ಆಫ್ ಕೈಲಾಶ್ ತೆರೆಯಲಾಗುತ್ತಿದ್ದು, ಆರ್ಥಿಕತೆ ಪುನಶ್ಚೇತನದೊಂದಿಗೆ ತಮಗೆ ದೇಣಿಗೆ ನೀಡುರುವವರಿಗಾಗಿ ಈ ಬ್ಯಾಂಕ್ ಸಹಾಯಕವಾಗಿದೆ. ಎಜಿಒ ಮಾದರಿಯಲ್ಲಿ ಇದು ಕರ್ತವ್ಯ ನಿರ್ವಹಿಸಲಿದೆ ಎಂದಿದ್ದಾನೆ. ಇದರೊಂದಿಗೆ ಆ.22ರಂದೇ ಇದು ಸ್ಥಾಪನೆಯಾಗಲಿದೆ. ಈ ದಿನಾಂಕವನ್ನು ನೋಟ್ಮಾಡಿಟ್ಟುಕೊಳ್ಳಿ ಎಂದಿರುವುದು ಹಾಸ್ಯಸ್ಪದವಾಗಿದೆ.
ಇದಕ್ಕಾಗಿ 300 ಪುಟಗಳ ಆರ್ಥಿಕತೆಯ ದಾಖಲೆಗಳನ್ನು ಸಿದ್ದಪಡಿಸಲಾಗಿದೆ. ಆಂತರಿಕ ಹಾಗೂ ಬಾಹ್ಯ ಆಂತರಿಕತೆಯ ಎಲ್ಲವೂ ಕಾನೂನು ಬದ್ದವಾಗಿಯೇ ಇದೆ. ವ್ಯಾಟಿಕನ್ ಬ್ಯಾಂಕ್ ಮಾದರಿಯಲ್ಲಿ ಬ್ಯಾಂಕ್ ಆಫ್ ಕೈಲಾಶ್ ಕಾರ್ಯನಿರ್ವಹಿಸಲಿದೆ ಎಂದಿದ್ದಾನೆ.
ಒಟ್ಟು 2 ಉದ್ದೇಶಗಳಿಗಾಗಿ ಈ ಬ್ಯಾಂಕ್ ಆಫ್ ಕೈಲಾಶ್ ತೆರೆಯಲಾಗುತ್ತಿದ್ದು, ಆರ್ಥಿಕತೆ ಪುನಶ್ಚೇತನದೊಂದಿಗೆ ತಮಗೆ ದೇಣಿಗೆ ನೀಡುರುವವರಿಗಾಗಿ ಈ ಬ್ಯಾಂಕ್ ಸಹಾಯಕವಾಗಿದೆ. ಎಜಿಒ ಮಾದರಿಯಲ್ಲಿ ಇದು ಕರ್ತವ್ಯ ನಿರ್ವಹಿಸಲಿದೆ ಎಂದಿದ್ದಾನೆ. ಇದರೊಂದಿಗೆ ಆ.22ರಂದೇ ಇದು ಸ್ಥಾಪನೆಯಾಗಲಿದೆ. ಈ ದಿನಾಂಕವನ್ನು ನೋಟ್ಮಾಡಿಟ್ಟುಕೊಳ್ಳಿ ಎಂದಿರುವುದು ಹಾಸ್ಯಸ್ಪದವಾಗಿದೆ.
ನ್ನು ಈತನ ನೋಟನ್ನು ಇಡೀ ವಿಶ್ವದ ಯಾವುದೇ ರಾಷ್ಟ್ರಗಳು ಬೇಕಿದ್ದರೂ, ಬಳಸಬಹುದು ಎಂದಿದ್ದಾನೆ. ಈತನ ಭಾವಚಿತ್ರ ಹೊಂದಿರುವ ನೋಟುಗಳು ಮಾತ್ರ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ. ಬಿಡಿದಿ ಸಮೀಪದ ನಿತ್ಯಾನಂದ ಆಶ್ರಮದಿಂದ ಪರಾರಿಯಾಗಿರುವ ನಿತ್ಯಾನಂದ, ಇಕ್ವಿಂಡಾರ್ನಲ್ಲಿ ದೇಶವನ್ನೆ ಸೃಷ್ಟಿಸಿಕೊಂಡಿರುವುದಾಗಿ ಸುದ್ದಿಯಾಗಿತ್ತು.