- Advertisement -


- Advertisement -
ಮಂಗಳೂರು: ಯಕ್ಷಗಾನ ರಂಗದ ಹಿರಿಯ ಹಾಗೂ ಪ್ರಸಿದ್ಧ ಹಾಸ್ಯ ಕಲಾವಿದ ಕಾಸರಕೋಡು ಶ್ರೀಧರ್ ಭಟ್ ಅವರು ನಿಧನರಾಗಿದ್ದಾರೆ. ಅವರ ಅಗಲಿಕೆಯಿಂದ ಕನ್ನಡದ ಸಾಂಸ್ಕೃತಿಕ ಲೋಕ ಮತ್ತು ಯಕ್ಷಗಾನ ಕ್ಷೇತ್ರಕ್ಕೆ ಅಪಾರ ನಷ್ಟವಾಗಿದೆ.
ತಮ್ಮ ವಿಶಿಷ್ಟ ಅಭಿನಯ, ಅದ್ಭುತ ಹಾಸ್ಯಪ್ರತಿಭೆ ಹಾಗೂ ಯಕ್ಷಗಾನ ಕಲೆಯ ಮೇಲಿನ ಅಪಾರ ಪ್ರೀತಿಯಿಂದ ಅವರು ಲಕ್ಷಾಂತರ ಅಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದ ಸ್ಥಾನ ಪಡೆದಿದ್ದರು.
ಅವರ ಅಗಲಿಕೆಗೆ ಯಕ್ಷಗಾನಾಭಿಮಾನಿಗಳು, ವಿವಿಧ ಕಲಾ ಸಂಘಟನೆಗಳು ಹಾಗೂ ಸಾಂಸ್ಕೃತಿಕ ಗಣ್ಯರು ತೀವ್ರ ಕಂಬನಿ ಮಿಡಿದಿದ್ದಾರೆ.
- Advertisement -


