- Advertisement -


- Advertisement -
ಉಡುಪಿ: ನಾಪತ್ತೆಯಾಗಿದ್ದ ಯುವಕ ಯುವತಿ ಮದುವೆಯಾಗಿ ಪತ್ತೆಯಾಗಿರುವ ಘಟನೆ ಕುಂದಾಪುರದಲ್ಲಿ ನಡೆದಿದೆ.
ಉಪ್ಪಿನಕುದ್ರುವಿನ ಬಾಬು ಪೂಜಾರಿ ಅವರ ಪುತ್ರ ಸುಹಾಸ್ (23) ಹಾಗೂ ಅದೇ ಊರಿನ ಭಾಸ್ಕರ ಆಚಾರ್ಯ ಅವರ ಪುತ್ರಿ ಪಲ್ಲವಿ (18) ಅವರಿಬ್ಬರು ಮನೆಯಿಂದ ಜು.13 ರಂದು ನಾಪತ್ತೆಯಾಗಿದ್ದು ಈಗ ಮದುವೆಯಾಗಿ ಕುಂದಾಪುರ ಪೊಲೀಸ್ ಠಾಣೆಗೆ ಬಂದ ಘಟನೆ ವರದಿಯಾಗಿದೆ.
ಈ ವೇಳೆ ಅವರಿಬ್ಬರೂ ಕೂಡ ತಂದೆ- ತಾಯಿಯೊಂದಿಗೆ ಹೋಗಲು ಒಪ್ಪದೆ ನಾವು ಪ್ರತ್ಯೇಕವಾಗಿ ಇರುವುದಾಗಿ ಹೇಳಿಕೆಯನ್ನು ಪೊಲೀಸರಿಗೆ ಬರೆದುಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.
- Advertisement -


