Saturday, July 25, 2026
HomeWorldಹವಾಮಾನ ವೈಪರೀತ್ಯದಿಂದ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಪುನರಾರಂಭ

ಹವಾಮಾನ ವೈಪರೀತ್ಯದಿಂದ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಪುನರಾರಂಭ

- Advertisement -
- Advertisement -

ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಆರು ದಿನಗಳಿಂದ ನಿರಂತರ ಮಳೆ, ಭೂಕುಸಿತ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಸ್ಥಗಿತಗೊಂಡಿದ್ದ ಪವಿತ್ರ ಅಮರನಾಥ ಯಾತ್ರೆಯನ್ನು ಆಡಳಿತ ಮಂಡಳಿಯು ಶನಿವಾರದಂದು ಅಧಿಕೃತವಾಗಿ ಪುನರಾರಂಭಿಸಿದೆ.

ಹವಾಮಾನ ಸುಧಾರಿಸಿ, ಉಧಮ್‌ಪುರ ರಾಂಬನ್ ಮಾರ್ಗದ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿದ್ದ ಭೂಕುಸಿತದ ಅವಶೇಷಗಳನ್ನು ತೆರವುಗೊಳಿಸಿದ ನಂತರ ಭಗವತಿ ನಗರದ ಮೂಲ ಶಿಬಿರದಿಂದ ಹೊಸ ಯಾತ್ರಿಕರ ತಂಡಕ್ಕೆ ಅಧಿಕಾರಿಗಳು ಪ್ರಯಾಣಿಸಲು ಅನುಮತಿ ನೀಡಿದ್ದಾರೆ. ಅದರಂತೆ, 1,470 ಮಹಿಳೆಯರು, 25 ಮಕ್ಕಳು ಹಾಗೂ 54 ಸಾಧುಗಳು ಸೇರಿದಂತೆ ಒಟ್ಟು 6,269 ಯಾತ್ರಿಕರನ್ನೊಳಗೊಂಡ 18ನೇ ಬ್ಯಾಚ್, 223 ವಾಹನಗಳ ಬೆಂಗಾವಲು ಪಡೆಯೊಂದಿಗೆ ಬೆಳಗಿನ ಜಾವ 2:40 ರ ಸುಮಾರಿಗೆ ಬಾಲ್ಟಾಲ್ ಬೇಸ್ ಕ್ಯಾಂಪ್‌ನತ್ತ ತೆರಳಿದೆ.

ಪ್ರಸ್ತುತ ಹವಾಮಾನ ಮತ್ತು ಹಾದಿಯ ಸ್ಥಿತಿಗತಿಯನ್ನು ಗಮನದಲ್ಲಿಟ್ಟುಕೊಂಡು ಈ ಬ್ಯಾಚ್‌ಗೆ 14 ಕಿಲೋಮೀಟರ್‌ಗಳಷ್ಟು ಕಿರಿದಾದ ಬಾಲ್ಟಾಲ್ ಮಾರ್ಗವನ್ನು ಮಾತ್ರ ನಿಯೋಜಿಸಲಾಗಿದ್ದು, ಸಾಂಪ್ರದಾಯಿಕ 48 ಕಿಲೋಮೀಟರ್ ಉದ್ದದ ಪಹಲ್ಗಾಮ್ ಮಾರ್ಗವನ್ನು ಇನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಿಲ್ಲ. ಇನ್ನು ಸುರಕ್ಷತೆಯ ದೃಷ್ಟಿಯಿಂದ ಜಮ್ಮುವಿನಿಂದ ಪ್ರಯಾಣಿಸುವ ಎಲ್ಲಾ ಯಾತ್ರಿಕರಿಗೂ ಬಿಗಿ ಭದ್ರತಾ ಪಡೆ ಮತ್ತು ಬೆಂಗಾವಲು ಪಡೆಯ ರಕ್ಷಣೆ ಒದಗಿಸಲಾಗಿದೆ.

- Advertisement -

Latest News

error: Content is protected !!