Monday, June 29, 2026
Homeಅಪರಾಧದೇವಸ್ಥಾನದಲ್ಲಿ ಬೆಳಗಿನ ಜಾವ ಕಳ್ಳತನಕ್ಕೆ ನಡೆದ ಭಾರಿ ಯತ್ನ ವಿಫಲ

ದೇವಸ್ಥಾನದಲ್ಲಿ ಬೆಳಗಿನ ಜಾವ ಕಳ್ಳತನಕ್ಕೆ ನಡೆದ ಭಾರಿ ಯತ್ನ ವಿಫಲ

- Advertisement -
- Advertisement -

ಭಟ್ಕಳ: ತಾಲೂಕಿನ ಶಿರಾಲಿಯ ಪ್ರಸಿದ್ಧ ಶ್ರೀ ಮಹಾಗಣಪತಿ ಮಹಾಮಾಯಾ (ಎಂ.ಜಿ.ಎಂ.) ದೇವಸ್ಥಾನದಲ್ಲಿ ಸೋಮವಾರ ಬೆಳಗಿನ ಜಾವ ಕಳ್ಳತನಕ್ಕೆ ನಡೆದ ಭಾರಿ ಯತ್ನವೊಂದು ಸಣ್ಣದೊಂದು ಸದ್ದಿನಿಂದಾಗಿ ವಿಫಲವಾಗಿದೆ.

ಕಳ್ಳರು ದೇವಸ್ಥಾನದ ಹಿಂಬದಿಯ ಕಬ್ಬಿಣದ ಬಾಗಿಲನ್ನು ಗ್ಯಾಸ್ ಕಟ್ಟರ್ ಮೂಲಕ ಕತ್ತರಿಸಿ ಒಳನುಗ್ಗಲು ಪ್ರಯತ್ನಿಸುತ್ತಿದ್ದಾಗ ಉಂಟಾದ ಸಣ್ಣ ಶಬ್ದವನ್ನು ಕೇಳಿ ಒಳಗಿದ್ದ ಸಿಬ್ಬಂದಿ ತಕ್ಷಣವೇ ಕೂಗಿಕೊಂಡಿದ್ದಾರೆ. ಇದರಿಂದಾಗಿ ಗಾಬರಿಗೊಂಡ ಕಳ್ಳರು ದೇವಸ್ಥಾನದಲ್ಲಿದ್ದ ಚಿನ್ನಾಭರಣ ಹಾಗೂ ಬೆಳ್ಳಿಯ ಸಾಮಗ್ರಿಗಳನ್ನು ಕಳ್ಳತನ ಮಾಡುವ ತಮ್ಮ ಕೃತ್ಯವನ್ನು ಅರ್ಧಕ್ಕೆ ಕೈಬಿಟ್ಟು ಅಲ್ಲಿಂದ ಪರಾರಿಯಾಗಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ದೇವಸ್ಥಾನದ ವ್ಯವಸ್ಥಾಪಕರಾದ ಅಜಯ ಜಯಕರ ಪ್ರಭು ಅವರು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

- Advertisement -

Latest News

error: Content is protected !!