- Advertisement -
![]()
- Advertisement -
ಬಂಟ್ವಾಳ : ಕೆಲಸಕ್ಕೆಂದು ಹೋದ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಘಟನೆ ರಾಯಿ ಕುಟ್ಟಿಕಳ ಎಂಬಲ್ಲಿ ನಡೆದಿದೆ. ಮೂಲತಃ ಬೆಂಜನಪದವು ನಿವಾಸಿಯಾಗಿರುವ ಸದ್ಯ ರಾಯಿ ಕುಟ್ಟಿಕಳ ಎಂಬಲ್ಲಿ ಪತ್ನಿ ಮನೆಯಲ್ಲಿ ವಾಸವಾಗಿದ್ದ ರಾಜೇಶ್ (37) ನಾಪತ್ತೆಯಾದವರು.
ಕಳೆದ ಐದಾರು ತಿಂಗಳಿನಿಂದ ವಿಪರೀತ ಕುಡಿತದ ಚಟಕ್ಕೆ ಬಿದ್ದಿದ್ದ ರಾಜೇಶ್ ಮನೆಯಲ್ಲಿ ಪತ್ನಿ ಜೊತೆ ನಿತ್ಯ ಗಲಾಟೆ ಮಾಡುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಜೂನ್ 9 ರಂದು ಬೆಳಿಗ್ಗೆ ಕೆಲಸಕ್ಕೆಂದು ಗುರುಪುರ ಕೈಕಂಬಕ್ಕೆ ಹೋಗಿದ್ದು, ಮನೆಗೆ ವಾಪಸು ಬರದೆ ಪೋನ್ ಸ್ವಿಚ್ ಆಫ್ ಆಗಿದೆ ಎಂದು ಪತ್ನಿ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.
- Advertisement -


