Thursday, June 4, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಪತಿಯಿಂದ ಕುಡಿದು ಬಂದು ಪತ್ನಿಯ ಕೊಲೆ ಯತ್ನ; ಪತ್ನಿ ಗಂಭೀರ ,ಪತಿ ಕೂಡ...

ಬೆಳ್ತಂಗಡಿ : ಪತಿಯಿಂದ ಕುಡಿದು ಬಂದು ಪತ್ನಿಯ ಕೊಲೆ ಯತ್ನ; ಪತ್ನಿ ಗಂಭೀರ ,ಪತಿ ಕೂಡ ಗಾಯ

- Advertisement -
- Advertisement -

ಬೆಳ್ತಂಗಡಿ: ಸರಳಿನಿಂದ ಪತ್ನಿಯ ತಲೆಗೆ ಹಲ್ಲೆ ನಡೆಸಿ ಆಕೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ದಾಖಲಾದ ಘಟನೆ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಪಡಂಗಡಿಯ ಪೊಯ್ಯೆಗುಡ್ಡೆ ಎಂಬಲ್ಲಿ ಏ. 26 ರಂದು ನಡೆದಿದೆ. ಫ್ರಾನ್ಸಿಸ್ ಮೋನಿಸ್ (76) ಹಲ್ಲೆ ನಡೆಸಿದ ಪತಿ. ಥೆರೆಸಾ ಮೋನಿಸ್ (73) ಹಲ್ಲೆಗೊಳಗಾದ ಪತ್ನಿ.

ಪ್ರಕರಣದ ವಿವರ; ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಪೊಯ್ಯೆಗುಡ್ಡೆ ನಿವಾಸಿ ಫ್ರಾನ್ಸಿಸ್ ಮೋನಿಸ್ (76) ಎಂಬವರು ಏ.26 ರಂದು ರಾತ್ರಿ 12:30 ರ ವೇಳೆಗೆ ವಿಪರೀತ ಕುಡಿದು ಜೋರಾಗಿ ಬೊಬ್ಬೆ ಹೊಡೆದುಕೊಂಡು ಮನೆಗೆ ಬಂದು 73 ವರ್ಷ ಪ್ರಾಯದ ಪತ್ನಿ ಥೆರೆಸಾ ಮೋನಿಸ್ ರವರಲ್ಲಿ ಗಲಾಟೆ ಮಾಡಿದ್ದಾರೆ. ಈ ವೇಳೆ  ಸೊಸೆ ಮತ್ತು ಮಗ ಕಿರಣ್ ಮೋನಿಸ್ ರವರು ಫ್ರಾನ್ಸಿಸ್ ಮೋನಿಸ್ ಅವರಲ್ಲಿ ಯಾಕೆ ಗಲಾಟೆ ಮಾಡುತ್ತಿದ್ದೀರಿ ಎಂದು ಕೇಳಿದಾಗ ಕೋಪಗೊಂಡ ಫ್ರಾನ್ಸಿಸ್ ಮೋನಿಸ್ ಕೊಲೆ ಮಾಡುವ ಉದ್ದೇಶದಿಂದ ಅವರ ಕೈಯಲ್ಲಿದ್ದ ಬಿಳಿ ಬಟ್ಟೆ ಸುತ್ತಿದ್ದ ಸರಳಿನಿಂದ ಥೆರೆಸಾ ಮೋನಿಸ್ ಅವರ ತಲೆಗೆ ತೀವ್ರು ರಕ್ತಗಾಯವಾಗುವ ರೀತಿಯಲ್ಲಿ ಹೊಡೆದಿದ್ದೆ.  ಇದನ್ನು ಕಂಡು ಗಾಬರಿಗೊಂಡು ಹತ್ತಿರ ಹೋದಾಗ ಫ್ರಾನ್ಸಿಸ್ ಮೋನಿಸ್ ಅವರು ಸರಳನ್ನು ಅಲ್ಲಿಯೇ ಬೀಸಾಡಿ ರೂಮಿಗೆ ಹೋಗುವಾಗ ಸೊಸೆ ಮತ್ತು ಮಗ ಕಿರಣ್ ಅವರನ್ನು ಉದ್ದೇಶಿಸಿ ನನ್ನ ತಂಟೆಗೆ ಬಂದರೆ ಇದೇ ರೀತಿ ಮಾಡುತ್ತೇನೆ ಎಂದು ಬೆದರಿಸಿದ್ದಾರೆ.  ಕೂಡಲೇ ಮಗ ಹಾಗೂ ಸೊಸೆ ನೆರೆಮನೆಯ ಸಾಜಿಂಬಿ ಹಾಗೂ ಸಂಬಂಧಿಕರಾದ ಪೀಟರ್ ಮೋನಿಸ್, ಪಾಸ್ಕಲ್ ಮೋನಿಸ್ ರವರಿಗೆ ಕರೆ ಮಾಡಿದಾಗ ಆವರೆಲ್ಲರೂ ಬಂದು ಖಾಸಗಿ ವಾಹನವೊಂದರಲ್ಲಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಥೆರೆಸಾ ಮೋನಿಸ್ ಅವರನ್ನು ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿಗೆ ಕೊಂಡುಹೋಗಲು ತಿಳಿಸಿದ್ದಾರೆ. ಬಳಿಕ ಥೆರೆಸಾ ಮೋನಿಸ್ ಅವರನ್ನು ಮಂಗಳೂರು ಕೆಎಂಸಿ ಅತ್ತಾವರ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ಚಿಕಿತ್ಸೆಗೆ ದಾಖಲಿಸಿದ್ದಾರೆ. ಕೊಲೆ ಮಾಡುವ ಉದ್ದೇಶದಿಂದಲೇ ಸರಳಿನಿಂದ ಥೆರೆಸಾ ಮೋನಿಸ್ ಹೊಡೆದ ಫ್ರಾನ್ಸಿಸ್ ಮೋನಿಸ್ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಸೊಸೆ ಪ್ರಿಯಾ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪತ್ನಿ ಮೇಲೆ ಕೊಲೆ ಯತ್ನ ನಡೆಸಿದ ಪತಿ ಫ್ರಾನ್ಸಿಸ್ ಮೋನಿಸ್(76) ಕೂಡ ಕೊಲೆ ಯತ್ನ ಮಾಡುವ ವೇಳೆ ಗಾಯಗೊಂಡಿದ್ದರಿಂದ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಪೊಲೀಸ್ ಭದ್ರತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಈ ಬಗ್ಗೆ ಆರೋಪಿ ಫ್ರಾನ್ಸಿಸ್ ಮೋನಿಸ್ ವಿರುದ್ಧ ಬೆಳ್ತಂಗಡಿ ಪೊಲೀಸರು BNS -2023 (109,351(2)) ಅಡಿಯಲ್ಲಿ ಎ.27 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ

- Advertisement -

Latest News

error: Content is protected !!