Friday, August 28, 2026
Homeಕರಾವಳಿಮಂಗಳೂರುವಿಟ್ಲ: ರೌಡಿ ಶೀಟರ್ ಅಬ್ದುಲ್ ಖಾದರ್‌ ಮೂಡಿಗೆರೆಗೆ ಗಡಿಪಾರು

ವಿಟ್ಲ: ರೌಡಿ ಶೀಟರ್ ಅಬ್ದುಲ್ ಖಾದರ್‌ ಮೂಡಿಗೆರೆಗೆ ಗಡಿಪಾರು

- Advertisement -
- Advertisement -

ವಿಟ್ಲ: ರೌಡಿ ಶೀಟರ್ ಬಂಟ್ವಾಳ ತಾಲೂಕಿನ ಕಸಬ ಗ್ರಾಮದ ಅಬ್ದುಲ್ ಖಾದರ್‌ ಅಲಿಯಾಸ್ ಶೌಕತ್  ನನ್ನು ಮೂಡಿಗೆರೆಗೆ ಗಡಿಪಾರು ಮಾಡಲಾಗಿದೆ.

 ಈತನ ಮೇಲೆ ಹಲ್ಲೆ ದೊಂಬಿ, ನಿಷೇಧಿತ ಮಾದಕ ದ್ರವ್ಯ ಸೇವನೆ,  ಏನ್ ಡಿ ಪಿ ಎಸ್ ಕಾಯ್ದೆಯಂತೆ  3 ಪ್ರಕರಣಗಳು ದಾಖಲಾಗಿದ್ದು ಈತನನ್ನು ವಿಟ್ಲ ಪೊಲೀಸ್ ಠಾಣೆಯ ಠಾಣಾಧಿಕಾರಿಗಳ ವರದಿಯಂತೆ ಸಹಾಯಕ ಆಯುಕ್ತರು ಹಾಗೂ ಉಪವಿಭಾಗಿಯ ದಂಡಾಧಿಕಾರಿ ಮಂಗಳೂರು ರವರು ದಕ್ಷಿಣ ಕನ್ನಡ ಜಿಲ್ಲೆಯಿಂದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಿರುತ್ತಾರೆ. ಆದೇಶದಂತೆ ದಿನಾಂಕ 08-01-2026 ರಂದು ದಕ್ಷಿಣ ಕನ್ನಡ ಜಿಲ್ಲೆಯಿಂದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪೊಲೀಸ್ ಠಾಣೆ ಗೆ ಸುರಕ್ಷಿತವಾಗಿ ಕಳುಹಿಸಲಾಗಿದೆ.

- Advertisement -

Latest News

error: Content is protected !!