Saturday, June 6, 2026
Homeಕರಾವಳಿಮಂಗಳೂರುಮಂಗಳೂರು; ಭಾರೀ ಮಳೆಗೆ ಮನೆಗೆ ನೀರು ನುಗ್ಗಿತೆಂದು ಮನೆ ಖಾಲಿ ಮಾಡಿದ ಕೆಲವೇ ಕ್ಷಣಗಳಲ್ಲಿ ಮನೆ...

ಮಂಗಳೂರು; ಭಾರೀ ಮಳೆಗೆ ಮನೆಗೆ ನೀರು ನುಗ್ಗಿತೆಂದು ಮನೆ ಖಾಲಿ ಮಾಡಿದ ಕೆಲವೇ ಕ್ಷಣಗಳಲ್ಲಿ ಮನೆ ಮಾಲೀಕ ಸಾವು

- Advertisement -
- Advertisement -

ಮಂಗಳೂರು; ಭಾರೀ ಮಳೆಗೆ ಮನೆಗೆ ನೀರು ನುಗ್ಗಿತೆಂದು ಮನೆ ಖಾಲಿ ಮಾಡಿದ ಕೆಲವೇ ಕ್ಷಣಗಳಲ್ಲಿ ಮನೆ ಮಾಲೀಕ ಸಾವನ್ನಪ್ಪಿರುವ ಘಟನೆ   ಉಳ್ಳಾಲದ ಮಿಲ್ಲತ್‌ನಗರದಲ್ಲಿ  ನಡೆದಿದೆ. ಮಿಲ್ಲತ್ ನಗರ ನಿವಾಸಿ ರಫೀಕ್ (55) ಮೃತರು.

ಭಾರೀ ಮಳೆಗೆ ಮಿಲ್ಲತ್ ನಗರದಲ್ಲಿ ಕೃತಕ ನೆರೆ ಸೃಷ್ಟಿಯಾಗಿ ಮನೆಯೊಂದಕ್ಕೆ ನೀರು ನುಗ್ಗಿದೆ. ಈ ಮನೆಯವರು ಮನೆ ಖಾಲಿ ಮಾಡಿ ಸಂಬಂಧಿಕರ ಮನೆಗೆ ಹೊರಟಿದ್ದರು. ಇದೇ ವೇಳೆ ಮನೆ ಯಜಮಾನ ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದಿದ್ದು, ಆಸ್ಪತ್ರೆಗೆ ಸಾಗಿಸುವ ಸಂದರ್ಭ ದಾರಿ ಮಧ್ಯೆ ಮೃತಪಟ್ಟಿದ್ದಾರೆ.

ಉಳ್ಳಾಲ ದರ್ಗಾ ಸಮಿತಿ ಸದಸ್ಯರಾಗಿದ್ದ ರಫೀಕ್ ಪತ್ನಿ, ಪುತ್ರ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.

- Advertisement -

Latest News

error: Content is protected !!