Thursday, June 26, 2025
Homeಕರಾವಳಿಮಂಗಳೂರುಬೆಳ್ತಂಗಡಿ : ನೆರಿಯದಲ್ಲಿ ಮನೆಯಂಗಳದಲ್ಲಿ ಮಲಗಿದ್ದ ನಾಯಿ ಮೇಲೆ ಚಿರತೆ ದಾಳಿ

ಬೆಳ್ತಂಗಡಿ : ನೆರಿಯದಲ್ಲಿ ಮನೆಯಂಗಳದಲ್ಲಿ ಮಲಗಿದ್ದ ನಾಯಿ ಮೇಲೆ ಚಿರತೆ ದಾಳಿ

spot_img
- Advertisement -
- Advertisement -

ಬೆಳ್ತಂಗಡಿ : ಚಿರತೆಯೊಂದು ಸಾಕುನಾಯಿಯ ಮೇಲೆ ದಾಳಿ ಮಾಡಿದ ಘಟನೆ ನೆರಿಯದಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಅಂಕೊತ್ಯಾರ್ ಎಂಬಲ್ಲಿ ಸಿಜು ಎಂಬವರ ಮನೆಯಂಗಳಕ್ಕೆ ಜೂ.24ರ ಮುಂಜಾನೆ 3.30ರ ಸುಮಾರಿಗೆ ಚಿರತೆ ಬಂದು ನಾಯಿ ಮೇಲೆ ದಾಳಿ ಮಾಡಿದೆ.

ನಾಯಿ ಕೂಗಿದ ಶಬ್ದಕ್ಕೆ ಮನೆಯವರು ಎಚ್ಚೆತ್ತು ಹೊರಗೆ ಬರುತ್ತಿದ್ದಂತೆ ಚಿರತೆ ಸಮೀಪದ ಅರಣ್ಯದತ್ತ ಹೋಗಿದೆ. ಚಿರತೆ ದಾಳಿಗೆ ನಾಯಿಗೆ ಗಾಯಳಾಗಿವೆ. ಮಾಹಿತಿ ಪಡೆದ ಬೆಳ್ತಂಗಡಿ ಅರಣ್ಯ ಇಲಾಖೆಯ ನೆರಿಯ ಶಾಖೆಯ ಡಿಆರ್‌ ಎಫ್ ಒ ರವಿಚಂದ್ರ,ಚಿಬಿದ್ರೆ ಶಾಖೆಯ ಡಿಆರ್ ಎಫ್ ಒ ನಾಗೇಶ್ ಹಾಗೂ ಪಂಚಾಯಿತಿ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -
spot_img

Latest News

error: Content is protected !!