Saturday, June 28, 2025
Homeಕರಾವಳಿಪುತ್ತೂರು : ಮಾನಹಾನಿಕರ ಲೇಖನ ಪ್ರಕಟಿಸದಂತೆ ಸುದ್ದಿ ಬಿಡುಗಡೆ ಪತ್ರಿಕೆಗೆ ಶಾಶ್ವತ ನಿರ್ಬಂಧಕಾಜ್ಞೆ ಆದೇಶ

ಪುತ್ತೂರು : ಮಾನಹಾನಿಕರ ಲೇಖನ ಪ್ರಕಟಿಸದಂತೆ ಸುದ್ದಿ ಬಿಡುಗಡೆ ಪತ್ರಿಕೆಗೆ ಶಾಶ್ವತ ನಿರ್ಬಂಧಕಾಜ್ಞೆ ಆದೇಶ

spot_img
- Advertisement -
- Advertisement -

ಪುತ್ತೂರು: ನೈಜ ಸಂಗತಿಯನ್ನು ಸಮಾಜಕ್ಕೆ ವರದಿ ಮಾಡುವುದು ಪತ್ರಿಕೆಗಳ ಕರ್ತವ್ಯ ಮತ್ತು ತನ್ನ ವೈಯುಕ್ತಿಕ ದ್ವೇಷವನ್ನು ಇತ್ಯರ್ಥಗೊಳಿಸಲು ಪತ್ರಿಕೆಯನ್ನು ಬಳಸಬಾರದು ಎಂದು ಮಾನ್ಯ ನ್ಯಾಯಾಲಯ ಪ್ರತಿವಾದಿಗಳಿಗೆ ಚಾಟಿ ಬೀಸಿತು

ಪುತ್ತೂರು: ಸಾಮಾಜಿಕ ಕಾರ್ಯಕರ್ತ ದಿನೇಶ್ ಕುಮಾರ್ ಜೈನ್ ರವರ ವಿರುದ್ಧ ಯಾವುದೇ ಮಾನಹಾನಿಕರ ಲೇಖನ ಪ್ರಕಟಿಸದಂತೆ ಸುದ್ದಿ ಬಿಡುಗಡೆ ಪತ್ರಿಕೆಯ ಮುಖ್ಯಸ್ಥ ಡಾ. ಯು.ಪಿ ಶಿವಾನಂದ ಮತ್ತು ಇತರರ ವಿರುದ್ಧ ಶಾಶ್ವತ ನಿರ್ಬಂಧಕಾಜ್ಞೆ ನೀಡಿ ಪುತ್ತೂರಿನ ಮಾನ್ಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.

ಪ್ರಕರಣದ ಹಿನ್ನೆಲೆ: ಸುದ್ದಿ ಬಿಡುಗಡೆ ದಿನಪತ್ರಿಕೆ ದಿನಾಂಕ 25 ಜನವರಿ 2016 ಮತ್ತು 27 ಜನವರಿ 2016 ರಂದು ವಾದಿ ಸಾಮಾಜಿಕ ಕಾರ್ಯಕರ್ತ ದಿನೇಶ್ ಕುಮಾರ್ ಜೈನ್ ವಿರುದ್ಧ “ಅವರ ಪೈಕಿ ಪುತ್ತೂರಿನ ಎಲ್ಲಿಯೂ ಸಲ್ಲದಿದ್ದರೂ ಸಂಘಟನೆಯಲ್ಲಿ ಸ್ಥಾನ ಇಲ್ಲದಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಬಯ್ಯುವ ಮತ್ತು ದ್ವೇಷ ಹರಡುವ ಮೂಲಕ ತನ್ನ ಸಂಘಟನೆಯಲ್ಲಿ ಪುನಃ ಸ್ಥಾನ ಪಡೆಯಬಹುದು ಎಂದು ಪ್ರಯತ್ನ ನಡೆಸುತ್ತಿರುವ ವ್ಯಕ್ತಿಯ ಫೋಟೋ ಮತ್ತು ದೂರವಾಣಿ ಸಂಖ್ಯೆಯನ್ನು ಕೆಳಗೆ ನೀಡಲಾಗಿದೆ ಬಂದ್ ಗಲಭೆಗಳಿಂದ ಲಾಭ ಪಡೆಯುವ ನರಿ ದಿನೇಶ್ ಜೈನ್ ಮತ್ತು ಒಂದು ವೇಳೆ ಅವರು ತಮ್ಮ ಹಳೆಯ ಚಾಳಿಯನ್ನು ಬಿಡದಿದ್ದಲ್ಲಿ ಇನ್ನು ಮುಂದಕ್ಕೆ ಅವರು ಭಯೋತ್ಪಾದನೆ ಮಾಡದಂತೆ ಅವರನ್ನು ದೂರವಿಟ್ಟು ಆದಷ್ಟು ಎಚ್ಚರಿಕೆಯಿಂದ ಇರಬೇಕಾಗಿ ಕೇಳಿಕೊಳ್ಳುತ್ತೇವೆ” ಎಂಬುದಾಗಿ ಮಾನಹಾನಿಕರ ಲೇಖನವನ್ನು ವಾದಿಯ ಭಾವಚಿತ್ರ ಮತ್ತು ದೂರವಾಣಿ ಸಂಖ್ಯೆಯೊಂದಿಗೆ ಪ್ರಕಟಿಸಿರುವುದರ ವಿರುದ್ಧ ದಿನೇಶ್ ಕುಮಾರ್ ಜೈನ್ ರವರು ಚಾಣಕ್ಯ ಲಾ ಛೇಂಬರ್ಸ್ ನ ನ್ಯಾಯವಾದಿ ಶ್ಯಾಮ್ ಪ್ರಸಾದ್ ಕೈಲಾರ್ ರವರ ಮೂಲಕ ಯಾವುದೇ ಮಾನಹಾನಿಕರ ಲೇಖನವನ್ನು ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಪ್ರಕಟಿಸಿದಂತೆ ಶಾಶ್ವತ ನಿರ್ಬಂಧಕಾಜ್ಞೆ ಕೋರಿ ದಾವೆಯನ್ನು ದಾಖಲಿಸಿದ್ದರು

ವಾದ- ಪ್ರತಿವಾದ: ವಾದಿ ದಿನೇಶ್ ಕುಮಾರ್ ಜೈನ್ರವರ ಪರ ವಾದ ಮಂಡಿಸಿದ ನ್ಯಾಯವಾದಿ ಶ್ಯಾಮ್ ಪ್ರಸಾದ್ ಕೈಲಾರ್ ರವರು ಪತ್ರಿಕಾ ಸ್ವಾತಂತ್ರ್ಯ ಮತ್ತು ವಾಕ್ ಸ್ವಾತಂತ್ರ್ಯಕ್ಕೆ ಅದರದ್ದೇ ಆದ ಇತಿಮಿತಿಗಳನ್ನು ಭಾರತದ ಸಂವಿಧಾನದ ಆರ್ಟಿಕಲ್ 19 (2) ರಲ್ಲಿ ಹೇರಿದ್ದು ವಾಕ್ ಸ್ವಾತಂತ್ರ ಮತ್ತು ಪತ್ರಿಕಾ ಸ್ವಾತಂತ್ರ್ಯ ಹೆಸರಿನಲ್ಲಿ ಬೇರೊಬ್ಬ ವ್ಯಕ್ತಿಯ ಮಾನಹಾನಿ ಮಾಡುವ ಲೇಖನಗಳನ್ನು ಪ್ರಕಟಿಸುವುದು ಸಂವಿಧಾನ ವಿರೋಧಿಯಾಗಿದ್ದು ಮಾನಹಾನಿಕರ ಲೇಖನಗಳನ್ನು ತಡೆಯುವುದು ವ್ಯಕ್ತಿಯ ಮೂಲಭೂತ ಹಕ್ಕಾಗಿದೆ ವೈಯಕ್ತಿಕ ದ್ವೇಷಗಳನ್ನು ಪತ್ರಿಕೆ ಮೂಲಕ ತೋರಿಸುವುದು ಕಾನೂನುಬಾಹಿರ ಎಂಬುದಾಗಿ ವಾದ ಮಂಡಿಸಿದ್ದರು

ಪ್ರತಿವಾದಿ ಪರವಾದ: ವಾದಿ ದಿನೇಶ್ ಕುಮಾರ್ ಜೈನ್ರವರು ವಾಟ್ಸಪ್ ಮತ್ತು ಫೇಸ್ಬುಕ್ ಇತ್ಯಾದಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿವಾದಿ ಸುದ್ದಿ ಬಿಡುಗಡೆ ಪತ್ರಿಕೆ ಮತ್ತು ಅದರ ಮುಖ್ಯಸ್ಥರಾದ ಯು ಪಿ ಶಿವಾನಂದರ ವಿರುದ್ಧ ನಿಂದನಾತ್ಮಕವಾಗಿ ಬರವಣಿಗೆಯನ್ನು ಬರೆಯುತ್ತಿದ್ದಾರೆ ಮ ತ್ತು ಪತ್ರಿಕೆಯಲ್ಲಿ ವಾದಿಗೆ ಹೋಲಿಸಿರುವ ಪ್ರಾಣಿ ಬುದ್ಧಿವಂತಿಕೆ ಮತ್ತು ಚಾಣಾಕ್ಷತೆಯ ಸಂಕೇತ, ಪ್ರತಿವಾದಿಗಳಿಗೆ ವಾದಿಯ ಮಾನಹಾನಿ ಮಾಡುವ ಯಾವುದೇ ಉದ್ದೇಶ ಇರಲಿಲ್ಲ ಎಂಬುದಾಗಿ ಯು.ಪಿ ಶಿವಾನಂದ ಮತ್ತು ಇತರರ ಪರ ನ್ಯಾಯವಾದಿಯವರು ವಾದ ಮಂಡಿಸಿದ್ದರು.

ವಾದ ಪ್ರತಿವಾದ ಆಲಿಸಿದ ಮಾನ್ಯ ನ್ಯಾಯಾಲಯ ವಾದಿಪರ ನ್ಯಾಯವಾದಿ ಅವರ ವಾದವನ್ನು ಪುರಸ್ಕರಿಸಿ ನೈಜ ಸಂಗತಿಯನ್ನು ಸಮಾಜಕ್ಕೆ ವರದಿ ಮಾಡುವುದು ಪತ್ರಿಕೆಗಳ ಕರ್ತವ್ಯ ಮತ್ತು ತನ್ನ ವೈಯುಕ್ತಿಕ ದ್ವೇಷವನ್ನು ಇತ್ಯರ್ಥಗೊಳಿಸಲು ಪತ್ರಿಕೆಯನ್ನು ಬಳಸಬಾರದು ಎಂದು ಅಭಿಪ್ರಾಯ ಪಟ್ಟು ದಿನೇಶ್ ಕುಮಾರ್ ಜೈನ್ರವರು ಸುದ್ದಿ ಬಿಡುಗಡೆ ಮುಖ್ಯಸ್ಥ ಯು.ಪಿ ಶಿವಾನಂದ ಮತ್ತು ಇತರರ ವಿರುದ್ಧ ಸಲ್ಲಿಸಿದ ದಾವೆಯನ್ನು ಪುರಸ್ಕರಿಸಿ ಮಾನಹಾನಿಕರ ಲೇಖನವನ್ನು ಪ್ರಕಟಿಸದಂತೆ ಶಾಶ್ವತ ನಿರ್ಬಂಧಕಾಜ್ಞೆ ನೀಡಿ ಆದೇಶಿಸಿದೆ.

ವಾದಿಯ ಪರ ಚಾಣಕ್ಯ ಲಾ ಛೇಂಬರ್ಸ್ನ ನ್ಯಾಯವಾದಿ ಶ್ಯಾಮ್ ಪ್ರಸಾದ್ ಕೈಲಾರ್ ರವರು ವಾದ ಮಂಡಿಸಿದ್ದರು.

- Advertisement -
spot_img

Latest News

error: Content is protected !!