Thursday, June 4, 2026
Homeಕರಾವಳಿಮಂಗಳೂರುಮಂಗಳೂರು; ನಾನು ಪೊಲೀಸ್ ಅಧಿಕಾರಿ ಎಂದು ಹೇಳಿ ಯುವಕನಿಗೆ ವಂಚಿಸಿ 30 ಲಕ್ಷ ದೋಚಿದ ಖದೀಮ

ಮಂಗಳೂರು; ನಾನು ಪೊಲೀಸ್ ಅಧಿಕಾರಿ ಎಂದು ಹೇಳಿ ಯುವಕನಿಗೆ ವಂಚಿಸಿ 30 ಲಕ್ಷ ದೋಚಿದ ಖದೀಮ

- Advertisement -
- Advertisement -

ಮಂಗಳೂರು; ನಾನು ಪೊಲೀಸ್ ಅಧಿಕಾರಿ ಎಂದು ಹೇಳಿ ಯುವಕನಿಗೆ ವಂಚಿಸಿ ಖದೀಮನೊಬ್ಬ 30 ಲಕ್ಷ ರೂಪಾಯಿ ದೋಚಿದ ಘಟನೆ  ಮಾಡಿರುವ ಘಟನೆ ಬಜ್ಪೆಯಲ್ಲಿ ನಡೆದಿದೆ.

ಬಜ್ಪೆಯ ಸಂತ್ರಸ್ತ ಯುವಕನಿಗೆ ಕರೆ ಮಾಡಿದ್ದ ಅಪರಿಚಿತನೋರ್ವ ತಮ್ಮ ಹೆಸರಿನಲ್ಲಿ ಬ್ಯಾಂಕಿನ 25 ಖಾತೆಗಳು ತೆರೆಯಲಾಗಿದ್ದು, ನಿಮ್‌ ಖಾತೆಗಳಲ್ಲಿ ಅಪರಿಚಿತರು ವ್ಯವಹಾರ ನಡೆಸುತ್ತಿದ್ದಾರೆ ಎಂದು ಬೆದರಿಕೆ ಕರೆ ಮಾಡಿದ್ದ.

ಸಂತ್ರಸ್ತನು ಅಪರಿಚಿತನ ಕರೆಗೆ ಹೆದರಿ ಆತ ಹೇಳಿದಂತೆ ಅವರ ಐಸಿಐಸಿಐ ಬ್ಯಾಂಕ್‌ ಖಾತೆಯಲ್ಲಿದ್ದ ಸುಮಾರು 30 ಲಕ್ಷ ರೂ. ಹಣವನ್ನು ಹಂತ ಹಂತವಾಗಿ ಬೇರೆ ಬೇರೆ ಖಾತೆಗಳಿಗೆ ಜಮಾ ಮಾಡಿಸಿಕೊಂಡಿದ್ದಾನೆ. ಅಲ್ಲದೆ, ತಮ್ಮ ಖಾತೆ ಸಂಪೂರ್ಣ ಪರಿಶೀಲನೆ ನಡೆಸಿದ ಬಳಿಕ ರಿಸರ್ವ್ ಬ್ಯಾಂಕ್‌ ತಮ್ಮ ಹಣವನ್ನು ಹಿಂದಿರುಗಿಸಲಿದೆ ಎಂದು ಹೇಳಿದ್ದಾನೆ.

ಇದನ್ನು ನಂಬಿದ ಸಂತ್ರಸ್ತನು ಹಣ ವಾಪಾಸ್‌ ಬಾರದೇ ಇರುವುದನ್ನು ಮನಗಂಡು ತನ್ನ ಬ್ಯಾಂಕ್‌ ನಲ್ಲಿ ವಿಚಾರಿಸಿದ್ದಾನೆ. ಆಗ ಆತ ಮೋಸ ಹೋಗಿರುವುದು ತಿಳಿದಿದೆ. ಈ ಸಂಬಂಧ ಸಂತ್ರಸ್ತ ವ್ಯಕ್ತಿ ಬಜ್ಪೆ ಪೊಲೀಸ್‌ ಠಾಣೆಯಲ್ಲಿ ವಂಚನೆ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ

- Advertisement -

Latest News

error: Content is protected !!