Friday, June 27, 2025
Homeಕರಾವಳಿಉಡುಪಿಉಡುಪಿ: ಎರಡು ಪ್ರತ್ಯೇಕ ಪ್ರಕರಣದಲ್ಲಿ ಎಂಟಿಎಂ ಕಾರ್ಡ್ ಬದಲಾಯಿಸಿ ಲಕ್ಷಾಂತರ ರೂ.ವಂಚನೆ

ಉಡುಪಿ: ಎರಡು ಪ್ರತ್ಯೇಕ ಪ್ರಕರಣದಲ್ಲಿ ಎಂಟಿಎಂ ಕಾರ್ಡ್ ಬದಲಾಯಿಸಿ ಲಕ್ಷಾಂತರ ರೂ.ವಂಚನೆ

spot_img
- Advertisement -
- Advertisement -

ಉಡುಪಿ: ಎಂಟಿಎಂ ಕಾರ್ಡ್ ಬದಲಾಯಿಸಿ ಲಕ್ಷಾಂತರ ರೂ. ವಂಚಿಸಿರುವ ಘಟನೆ ಉಡುಪಿ ಹಾಗೂ ಕೋಟದಲ್ಲಿ ನಡೆದಿದೆ.

ಕೆಳಾರ್ಕಳಬೆಟ್ಟು ಗ್ರಾಮದ ಜಗದೀಶ ರಾವ್(69) ಎಂಬವರು ಅ.6ರಂದು ಸಂತೆಕಟ್ಟೆಯಲ್ಲಿರುವ ಎಟಿಎಂನಿಂದ ಹಣವನ್ನು ಡ್ರಾಂ ಮಾಡಿದ್ದರು.  ನಂತರ ಓರ್ವ ವ್ಯಕ್ತಿಯು ಸಹಾಯ ಮಾಡುವಂತೆ ನಟಿಸಿ ಜಗದೀಶ್ ರಾವ್ ಅವರ ಎಟಿಎಂ ಕಾರ್ಡನ್ನು ತೆಗೆದುಕೊಟ್ಟಿದ್ದನು.ಈ ಮಧ್ಯೆ ಆತ ಜಗದೀಶ್ ರಾವ್ ಅವರ ಗಮನಕ್ಕೆ ಬಾರದೇ ಎಟಿಎಂ ಕಾರ್ಡನ್ನು ಬದಲಾಯಿಸಿದ್ದನು. ಬಳಿಕ ಇವರ ಖಾತೆಯಿಂದ ಒಟ್ಟು 2,40,000ರೂ. ಹಣವನ್ನು ತೆಗೆದು ಮೋಸ ಮಾಡಿದ್ದಾನೆ ಎಂದು  ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಕೋಡಿ ಗ್ರಾಮದ ಚೆನ್ನಪ್ಪ(73) ಎಂಬವರು ಅ.4ರಂದು ಪಾಂಡೇಶ್ವರ ಗ್ರಾಮದ ಸಾಸ್ತಾನದಲ್ಲಿರುವ ಎಟಿಎಮ್‌ನಲ್ಲಿ ಹಣ ತೆಗೆಯಲು ಒಳಗೆ ಹೋಗಿದ್ದಾಗ  ಓರ್ವ ಅಪರಿಚಿತ ವ್ಯಕ್ತಿ ಸಹಾಯ ಮಾಡುವ ನೆಪದಲ್ಲಿ ಎಟಿಎಂ ಕಾರ್ಡನ್ನು ಬದಲಾಯಿಸಿದ್ದಾನೆ. ಬಳಿಕ ಆತ ಅ.4ರಿಂದ ಅ.7ರವರೆಗೆ ಸಾಲಿಗ್ರಾಮ, ಶಿವಮೊಗ್ಗ, ಕಾರ್ಗಲ್ ಹಾಗೂ ಗೋಕರ್ಣ ಕಡೆಗಳಲ್ಲಿ ಒಟ್ಟು 99,000ರೂ. ಹಣ ಚೆನ್ನಪ್ಪ ಖಾತೆಯಿಂದ ಡ್ರಾ ಮಾಡಿ ವಂಚಿಸಿರುವುದಾಗಿ ದೂರಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!