Thursday, June 26, 2025
Homeತಾಜಾ ಸುದ್ದಿಅರ್ಚಕನನ್ನೇ ಹೊತ್ತೊಯ್ದ ಚಿರತೆ; ಇದು 11 ದಿನದಲ್ಲಿ 7ನೇ ಪ್ರಕರಣ

ಅರ್ಚಕನನ್ನೇ ಹೊತ್ತೊಯ್ದ ಚಿರತೆ; ಇದು 11 ದಿನದಲ್ಲಿ 7ನೇ ಪ್ರಕರಣ

spot_img
- Advertisement -
- Advertisement -

ರಾಜಸ್ಥಾನ: ಇಲ್ಲಿನ ಉದಯಪುರದಲ್ಲಿ ಚಿರತೆ ದಾಳಿ ಮತ್ತೆ ಮುಂದುವರೆದಿದ್ದು, ಸೋಮವಾರ (ಸೆ.30) ಮುಂಜಾನೆ ದೇವಾಲಯದ ಅರ್ಚಕರೊಬ್ಬರನ್ನು ಚಿರತೆ ಹೊತ್ತೊಯ್ದಿದೆ ಎಂದು ಹೇಳಲಾಗಿದ್ದು ಅವರ ಮೃತದೇಹ ಪಕ್ಕದ ಕಾಡಿನಲ್ಲಿ ಪತ್ತೆಯಾಗಿದೆ.

ಇದು ಕಳೆದ ಹನ್ನೊಂದು ದಿನದಲ್ಲಿ ನಡೆದ ಏಳನೇ ಪ್ರಕರಣವಾಗಿದೆ. ಈ ಮೊದಲು ಅನೇಕ ಜನರ ಮೇಲೆ ಚಿರತೆ ದಾಳಿ ನಡೆಸಿರುವುದಾಗಿ ವರದಿಯಾಗಿದ್ದು ಗ್ರಾಮದ ಜನ ಭಯಭೀತರಾಗಿದ್ದಾರೆ.

ಅರಣ್ಯ ಇಲಾಖೆ ಸೆ.24ರಂದು ಗ್ರಾಮದಲ್ಲಿ ಚಿರತೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಚಿರತೆ ಹಿಡಿಯುವ ಅಭಿಯಾನ ಆರಂಭಿಸಿದ್ದು, ಇಲ್ಲಿಯವರೆಗೆ ನಾಲ್ಕು ಚಿರತೆಗಳನ್ನು ಸೆರೆ ಹಿಡಿಯಲಾಗಿದೆ. ಅವುಗಳನ್ನು ಉದಯಪುರದ ಸಜ್ಜನ್‌ಗಢ ಜೈವಿಕ ಉದ್ಯಾನವನಕ್ಕೆ ಬಿಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಆದರೆ ಈ ನಡುವೆ ಮತ್ತೆ ಗ್ರಾಮದಲ್ಲಿ ದಾಳಿ ಮುಂದುವರಿದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ಮುಂದುವರಿಸಲು ನಿರ್ಧರಿಸಿದ್ದಾರೆ.

ಸ್ಥಳೀಯರು ಭಯದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಚಿರತೆ ದಾಳಿಯಿಂದ ಜೀವನ ನಡೆಸುತ್ತಿದ್ದಾರೆ. ಇಲ್ಲಿನ ಕೆಲವು ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದ್ದು, ಜನರು ಸಂಜೆಯ ಬಳಿಕ ಮನೆಯಿಂದ ಹೊರಬರದಂತೆ ಸೂಚನೆ ನೀಡಲಾಗಿದೆ. ಒಂದು ವೇಳೆ ಜನರು ಹೊರಗೆ ಬರುವುದಿದ್ದರೂ ಗುಂಪು ಗುಂಪಾಗಿ ಹೊರಗೆ ಹೋಗುವಂತೆ ಸೂಚನೆ ನೀಡಲಾಗಿದೆ. ಒಂಟಿಯಾಗಿ ಅರಣ್ಯ ಪ್ರ್ರದೇಶಕ್ಕೆ ಹೋಗಬೇಡಿ ಮತ್ತು ಜಾನುವಾರುಗಳನ್ನು ಮೇಯಿಸುವಾಗ ಎಚ್ಚರಿಕೆ ವಹಿಸುವಂತೆ ಅರಣ್ಯ ಇಲಾಖೆ ಸ್ಥಳೀಯರಿಗೆ ಮನವಿ ಮಾಡಿದೆ.

- Advertisement -
spot_img

Latest News

error: Content is protected !!