- Advertisement -
- Advertisement -
ಬಂಟ್ವಾಳ: ಮಳೆ ಹಾನಿ ವೀಕ್ಷಣೆಗೆ ಬಿಜೆಪಿ ನಿಯೋಗ ಇಂದು ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿದ್ದು, ಬಂಟ್ವಾಳ ತಾಲೂಕಿನಲ್ಲಿ ವೀಕ್ಷಣೆ ನಡೆಸಿದೆ.
ಬಂಟ್ವಾಳ ಮಾರುಕಟ್ಟೆ, ಜಕ್ರಿಬೆಟ್ಟು ಡ್ಯಾಮ್, ನಾವೂರಿನ ಮುಳುಗಡೆಯಾದ ಪ್ರದೇಶಕ್ಕೆ ಭೇಟಿ ನೀಡಿದ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದ ತಂಡ ಪರಿಶೀಲನೆ ನಡೆಸಿದೆ.
ನೇತ್ರಾವತಿ ನದಿ ನೀರು ನುಗ್ಗಿ ಹಾನಿಯಾಗುರುವ ಪ್ರದೇಶಗಳಲ್ಲಿನ ಸ್ಥಿತಿಗತಿ ಬಗ್ಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮತ್ತು ಜಿಲ್ಲಾಡಳಿತದಿಂದ ವಿಪಕ್ಷ ನಾಯಕ ಅಶೋಕ್ ಮಾಹಿತಿ ಪಡೆದರು.ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಸೇರಿದಂತೆ ಬಿಜೆಪಿ ಮುಖಂಡರು ಈ ವೇಳೆ ಉಪಸ್ಥಿತರಿದ್ದರು.
ಇದೇ ವೇಳೆ ಇಂದು ಬೆಳಗ್ಗೆ ಮಂಗಳೂರಿನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಚೇರಿಗೆ ಭೇಟಿ ನೀಡಿದ ಆರ್. ಅಶೋಕ್ ಅವರನ್ನು ಮಾಜಿ ಸಂಸದ ನಳೀನ್ ಕುಮಾರ್ ಕಟೀಲ್ ಸ್ವಾಗತಿಸಿದರು.
- Advertisement -