Sunday, May 19, 2024
Homeಕರಾವಳಿಬೆಳ್ತಂಗಡಿ: ಕ್ಷೌರ ಮಾಡುತ್ತಿದ್ದಾಗಲೇ ಹೃದಯಾಘಾತವಾಗಿ ಕ್ಷೌರಿಕ ಸಾವು

ಬೆಳ್ತಂಗಡಿ: ಕ್ಷೌರ ಮಾಡುತ್ತಿದ್ದಾಗಲೇ ಹೃದಯಾಘಾತವಾಗಿ ಕ್ಷೌರಿಕ ಸಾವು

spot_img
- Advertisement -
- Advertisement -

ಬೆಳ್ತಂಗಡಿ: ಕ್ಷೌರ ಮಾಡುತ್ತಿದ್ದಾಗಲೇ ಹೃದಯಾಘಾತವಾಗಿ ಕ್ಷೌರಿಕ ಸಾವನ್ನಪ್ಪಿರುವ ಘಟನೆ ಉಜಿರೆಯಲ್ಲಿ ನಡೆದಿದೆ. ಮುಂಡಾಜೆ ಗ್ರಾಮದ ಸೋಮಂತಡ್ಕ ನಿವಾಸಿ, ಪ್ರಸ್ತುತ ಉಜಿರೆಯಲ್ಲಿ ನೆಲೆಸಿದ್ದ ರಾಧಾಕೃಷ್ಣ ಭಂಡಾರಿ (49) ಮೃತ ದುರ್ದೈವಿ.

ರಾಧಾಕೃಷ್ಣ ಭಂಡಾರಿ ಕೆಲವು ವರ್ಷಗಳಿಂದ ಆರ್‌.ಕೆ. ಸೆಲೂನ್‌ ಎಂಬ ಸ್ವಂತ ಅಂಗಡಿ ಹೊಂದಿ ಅಲ್ಲಿ ತಮ್ಮ ವೃತ್ತಿ ಮಾಡುತ್ತಿದ್ದರು. ಜತೆಗೆ ಉಜಿರೆ ಪೇಟೆಯಲ್ಲಿ ಆರ್‌.ಕೆ. ಬೇಕರಿ ಕೂಡ ಹೊಂದಿದ್ದರು. ನಿನ್ನೆ ಕ್ಷೌರ ಮಾಡುತ್ತಿರುವಾಗಲೇ ಅವರಿಗೆ ಎದೆನೋವು ಕಾಣಿಸಿಕೊಂಡಿದೆ.ಕೂಡಲೇ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ.

ರಾಧಾಕೃಷ್ಣ ಉಜಿರೆ ಸುರ್ಯ ರಸ್ತೆಯಲ್ಲಿ ನೂತನ ಮನೆ ನಿರ್ಮಿಸಿದ್ದು, ತಿಂಗಳ ಹಿಂದಷ್ಟೇ ಅದ್ದೂರಿಯ ಗೃಹಪ್ರವೇಶ ಕಾರ್ಯಕ್ರಮ ನಡೆದಿತ್ತು.ಮೃತರು ತಂದೆ, ತಾಯಿ, ಸಹೋದರ, ಪತ್ನಿ, ಪುತ್ರಿ, ಪುತ್ರನನ್ನು ಅಗಲಿದ್ದಾರೆ.

- Advertisement -
spot_img

Latest News

error: Content is protected !!