- Advertisement -
- Advertisement -
ಮಂಗಳೂರು : ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರಿಗೆ ಪಿಲಿ ಚಾಮುಂಡಿ ದೈವ ಅಭಯ ನೀಡಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಬೈಕಂಪಾಡಿಯ ಕುಡುಂಬೂರಿನ ನಡುಗಿರಿಯಲ್ಲಿ ಪಿಲಿ ಚಾಮುಂಡಿ ದೈವ ನೇಮೋತ್ಸವ ನಡೆದಿತ್ತು. ಅಲ್ಲಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತೆರಳಿದ್ದರು. ಈ ವೇಳೆ ಪಿಲಿ ಚಾಮುಂಡಿ ದೈವ ಡಿಸಿ ಮೈ ನೇವರಿಸಿದೆ. ಇದೇ ಸಂದರ್ಭದಲ್ಲಿ ಡಿಸಿ ಅವರು ದಯಾನಂದ ಕತ್ತಲೆಸಾರ್ ಅವರಿದಂ ದೈವಾರಾಧನೆಯ ಬಗ್ಗೆ ಮಾಹಿತಿ ಪಡೆದುಕೊಂಡರು.
ಇನ್ನು ಕುಡುಂಬೂರಿನ ಈ ಶ್ರೀ ಜಾರಂದಾಯ ಮತ್ತು ಪರಿವಾರ ದೈವಗಳ ಕ್ಷೇತ್ರ ನೂರಾರು ವರ್ಷಗಳ ಇತಿಹಾಸ ಹೊಂದಿದೆ. ಕೈಗಾರಿಕಾ ಪ್ರದೇಶಗಳಿಗಾಗಿ ಊರೇ ಖಾಲಿಯಾದರೂ ಇಲ್ಲಿನ ದೈವಾರಾಧನೆ ಮೂವತ್ತು ವರ್ಷಗಳ ನಂತರ ಜೀರ್ಣೋದ್ದಾರ ಗೊಂಡು ಪುನರಪಿ ಆರಂಭಗೊಂಡಿದೆ. ಪಂಚ ಧರ್ಮದೈವಗಳು ಈ ಊರನ್ನು ಮತ್ತು ಜನತೆಯನ್ನು ಕಾಯುತ್ತಿದೆ ಅನ್ನೋದು ಜನರ ನಂಬಿಕೆ.
- Advertisement -