Monday, May 20, 2024
Homeಇತರರಸ್ತೆಯಲ್ಲಿ ಸಿಕ್ಕ ಬ್ಯಾಗ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಬಂಗ್ಲೆಗುಡ್ಡೆ ನಿವಾಸಿಗಳು

ರಸ್ತೆಯಲ್ಲಿ ಸಿಕ್ಕ ಬ್ಯಾಗ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಬಂಗ್ಲೆಗುಡ್ಡೆ ನಿವಾಸಿಗಳು

spot_img
- Advertisement -
- Advertisement -

ಕಾರ್ಕಳ: ಕಾರ್ಕಳದ ಬಂಗ್ಲೆಗುಡ್ಡೆ ಜಂಕ್ಷನ್ ಬಳಿಯಲ್ಲಿ ನ.18 ರಂದು ನಗದು ಮತ್ತು ಇತರೆ ವಸ್ತುಗಳಿರುವ ಬ್ಯಾಗ್ ಅನ್ನು ಬಂಗ್ಲೆಗುಡ್ಡೆ ನಿವಾಸಿಗಳಾದ ಇಬ್ರಾಹಿಂ ಸಾಹೇಬ್ ಮತ್ತು ಹರ್ಷದ್ ಎಂಬವರಿಗೆ ದೊರೆತಿದ್ದು, ಅವರು ಪೊಲೀಸ್ ಸ್ಟೇಷನ್ ಗೆ ತಂದೊಪ್ಪಿಸಿದ್ದರು.

ಪೊಲೀಸರ ಸಹಾಯದಿಂದ ವಿಳಾಸ ಪತ್ತೆ ಮಾಡಿ, ಬ್ಯಾಗ್ ವಾರಸುದಾರರಾದ ಸಂದೇಶ್ ಶೆಟ್ಟಿ ಶಿವಪುರ ಅವರಿಗೆ ನೀಡಲಾಯಿತು. ದಾರಿ ಮಧ್ಯೆ ದೊರೆತ ಬ್ಯಾಗ್ ನ್ನು ಪೊಲೀಸ್ ಸ್ಟೇಷನ್ ಗೆ ನೀಡಿ ಪ್ರಾಮಾಣಿಕತೆ ಮೆರೆದ ಬಂಗ್ಲೆಗುಡ್ಡೆ ನಿವಾಸಿಗಳಾದ ಇಬ್ರಾಹಿಂ ಸಾಹೇಬ್ ಮತ್ತು ಹರ್ಷದ್ ಅವರಿಗೆ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಪರವಾಗಿ ಧನ್ಯವಾದವನ್ನು ತಿಳಿಸಲಾಯಿತು.

- Advertisement -
spot_img

Latest News

error: Content is protected !!