- Advertisement -
- Advertisement -
ಬೆಂಗಳೂರು: ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ರಾಜೀನಾಮೆಗೆ ಮುಂದಾಗಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಮಂತ್ರಿಪಟ್ಟ ಸಿಗುತ್ತೆ ಎಂಬ ಆಕಾಂಕ್ಷೆಯಲ್ಲಿದ್ದ ಹರಿಪ್ರಸಾದ್ ಹೆಸರನ್ನು ಸಚಿವರ ಪಟ್ಟಿಯಿಂದ ಹೈಕಮಾಂಡ್ ಕೈಬಿಟ್ಟಿದೆ. ಈ ಹಿನ್ನೆಲೆಯಲ್ಲಿ ಅಸಮಾಧಾನದೊಂಡ ಬಿ.ಕೆ.ಹರಿಪ್ರಸಾದ್ ರಾಜೀನಾಮೆಗೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಈಡಿಗ ಸಮುದಾಯದ ಕೋಟಾದಡಿ ಮಧು ಬಂಗಾರಪ್ಪಗೆ ಮಂತ್ರಿಗಿರಿ ಸಿಕ್ಕಿದ್ರಿಂದ ಹರಿಪ್ರಸಾದ್ ಸಚಿವ ಸ್ಥಾನದಿಂದ ವಂಚಿತರಾಗಿದ್ದಾರೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲೂ ಬಿ.ಕೆ.ಹರಿಪ್ರಸಾದ್ರಿಗೆ ಸಚಿವ ಸ್ಥಾನ ಕೊಡಬೇಕೆಂಬ ಒತ್ತಾಯವೂ ಕೇಳಿಬರ್ತಿದೆ.
- Advertisement -