- Advertisement -
- Advertisement -
ಬೆಂಗಳೂರು :ಇಂದೇ ಕಾಂಗ್ರೆಸ್ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಬಿಡಗುಡೆ ಮಾಡಲಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಐದು ಬೆರಳಿದೆ.ಹಾಗಾಗಿ ನಾವು ಐದು ಪಟ್ಟಿ ರಿಲೀಸ್ ಮಾಡುತ್ತೇವೆ. ಬುಧವಾರ ಅಂತಿಮ ಪಟ್ಟಿ ಬಿಡುಗಡೆಯಾಗಲಿದೆ. ಉಳಿದ ಎಂಟು ಕ್ಷೇತ್ರಕ್ಕೂ ಅಂದೇ ಘೋಷಣೆಯಾಗುತ್ತದೆ ಎಂದು ತಿಳಿಸಿದ್ದಾರೆ.
ಕನಕಪುರದಲ್ಲಿ ನಾನು ಅಭ್ಯರ್ಥಿ ಅಲ್ಲ. ಇಲ್ಲಿ ಪ್ರತಿಯೊಂದು ಮನೆಯವರೂ ಅಭ್ಯರ್ಥಿಗಳೇ. 40 ವರ್ಷಗಳಿಂದ ನನ್ನನ್ನು ಸಾಕಿದ್ದಾರೆ. 8 ಚುನಾವಣೆಗಳಲ್ಲಿ ನನಗೆ ಮತಗಳನ್ನು ನೀಡಿದ್ದಾರೆ. ಪ್ರತಿಯೊಂದು ಮನೆಯವರೂ ಅಭ್ಯರ್ಥಿಗಳಾಗಿದ್ದು, ಅವರೇ ಚುನಾವಣೆಯನ್ನು ಮಾಡುತ್ತಾರೆ ಎಂದು ಹೇಳಿದ್ದಾರೆ.
- Advertisement -