- Advertisement -
- Advertisement -
ಪಡುಬಿದ್ರೆ: ಹೆಜ್ಜೇನು ದಾಳಿಯಿಂದ ತಪ್ಪಿಸಿಕೊಳ್ಳಲು ಹೋಗಿ ಸಮುದ್ರಕ್ಕೆ ಹಾರಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ನಿನ್ನೆ(ಗುರುವಾರ) ಪಡುಬಿದ್ರೆ ಬೀಚ್ನಲ್ಲಿ ನಡೆದಿದೆ.
ಪಡುಬಿದ್ರಿ ಬೀಚ್ ನಿವಾಸಿ ವಾಸುದೇವ ಡಿ.ಸಾಲ್ಯಾನ್ (65) ಮೃತಪಟ್ಟವರು. ಇನ್ನು ಹೆಜ್ಜೇನು ದಾಳಿಯಲ್ಲಿ ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೃತ್ತಿಯಲ್ಲಿ ಮೀನುಗಾರರಾಗಿರುವ ವಾಸುದೇವ ಸಾಲ್ಯಾನ್ ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
- Advertisement -