ಹರ್ಯಾಣ; ಇಲ್ಲಿನ ಸಿರ್ಸಾದ್ ಗ್ರಾಮದ ಸರ್ಪಂಚ್ ಹುದ್ದೆಗೆ ಸ್ಪರ್ಧಿಸಿರುವ ಅಭ್ಯರ್ಥಿಯೊಬ್ಬರ ಚುನಾವಣೆ ಪ್ರಣಾಳಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಚುನಾವಣೆ ಪ್ರಣಾಳಿಕೆ ಓದಿದ ಅನೇಕರು ಸುಸ್ತಾಗಿ ಹೋಗಿದ್ದಾರೆ.
ಐಪಿಎಸ್ ಅಧಿಕಾರಿ ಅರುಣ್ ಬೋಥ್ರಾ ಈ ಚುನಾವಣಾ ಪ್ರಣಾಳಿಕೆಯನ್ನು ಟ್ವೀಟ್ ಮಾಡಿದ್ದು,’ನಾನು ಈ ಗ್ರಾಮಕ್ಕೆ ಶಿಫ್ಟ್ ಅಗುತ್ತಿದ್ದೇನೆ’ಎಂದು ಬರೆದಿದ್ದಾರೆ. ಜೈಕರಣ್ ಲಾಥ್ವಾಲ್ ಎಂಬವರ ಚುನಾವಣಾ ಪ್ರಣಾಳಿಕೆಯಲ್ಲಿ ಚುನಾವಣೆಯಲ್ಲಿ ಗೆದ್ದರೆ, ಮೂರು ವಿಮಾನ ನಿಲ್ದಾಣಗಳು, ಹೆಣ್ಣುಮಕ್ಕಳಿಗೆ ಉಚಿತ ಮೇಕಪ್ ಕಿಟ್, ಪ್ರತೀ ಕುಟುಂಬಕ್ಕೆ ಉಚಿತ ಬೈಕು, ವೈಫೈ, ಪೆಟ್ರೋಲ್ ಬೆಲೆಯಲ್ಲಿ ಪ್ರತೀ ಲೀಟರ್ಗೆ ರೂ.20 ಇಳಿಕೆ, ಜಿಎಸ್ಟಿ ರದ್ದು ಮಾಡುತ್ತೇನೆ ಎಂದು ಬರೆದಿದ್ದಾರೆ.
ಐಪಿಎಸ್ ಅಧಿಕಾರಿ ಅರುಣ್ ಬೋಥ್ರಾ ಈ ಕರಪತ್ರವನ್ನು ಟ್ವೀಟ್ ಮಾಡುತ್ತಿದ್ದಂತೆ ನೆಟ್ಟಿಗರು ನಾವು ಕೂಡ ಅದೇ ಗ್ರಾಮಕ್ಕೆ ಹೋಗುವ ಎಂದು ವಿಭಿನ್ನವಾಗಿ ಟ್ವೀಟ್ ಮಾಡಿದ್ದಾರೆ ಮತ್ತು ಆ ಗ್ರಾಮ ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ.


