- Advertisement -
- Advertisement -
ಹೈದರಾಬಾದ್: ಪೋಷಕರ ಅಜಾಗರೂಕತೆಯಿಂದ ಕೆಲವೊಮ್ಮೆ ಬಹಳದೊಡ್ಡ ಸಂಕಷ್ಟ ತಂದಿಡುತ್ತದೆ. ಅಂತಹ ಘಟನೆಯೊಂದು ವರದಿಯಾಗಿದ್ದು ಚಾರ್ಮಿನಾರ್ ನೋಡಬೇಕೆಂಬ ಆಸೆಯಿಂದ ಮನೆಯವರಿಗೆ ಮಾಹಿತಿ ನೀಡದೇ 6.50 ಲಕ್ಷ ರೂಪಾಯಿ ತೆಗೆದುಕೊಂಡು ನಾಪತ್ತೆಯಾಗಿದ್ದ 8 ಮಂದಿ ಅಪ್ರಾಪ್ತ ಮಕ್ಕಳನ್ನ ಆಟೋ ಚಾಲಕರು ಪೊಲೀಸರಿಗೆ ಒಪ್ಪಿಸಿದ್ದಾರೆ. ಸೂಕ್ತ ತನಿಖೆ ನಡೆಸಿದ ಹೈದರಾಬಾದ್ ಪೊಲೀಸರು ಮಕ್ಕಳು ಹಾಗೂ ನಗದನ್ನ ಪೋಷಕರಿಗೆ ಹಸ್ತಾಂತರಿಸಿದ್ದಾರೆ.
ದಾರಿಹೋಕರ ಬಳಿ ಚಾರ್ಮಿನಾರ್ಗೆ ಹೋಗುವ ದಾರಿಯನ್ನ ಕೇಳುತ್ತಿದ್ದ ಮಕ್ಕಳನ್ನ ಆಟೋ ಚಾಲಕರು ಗಮನಿಸಿದ್ದರು. ಈ ಮಕ್ಕಳು ಆಂಧ್ರಪ್ರದೇಶದ ಕಡಪಾ ಮೂಲದವರು ಮಕ್ಕಳು 2 ದಿನಗಳ ಹಿಂದೆ ತಮ್ಮ ಮನೆಯಿಂದ ಕಾಣೆಯಾಗಿದ್ದರು. ರೈಲಿನಲ್ಲಿ ಪ್ರಯಾಣ ಬೆಳೆಸಿದ್ದ 8 ಮಂದಿ ಅಪ್ರಾಪ್ತರು ನಾಂಪಲ್ಲಿ ರೈಲು ನಿಲ್ದಾಣದಲ್ಲಿ ಇಳಿದು ಅಲ್ಲಿಂದ ಕಾಲ್ನಡಿಗೆ ಮೂಲಕ ಅಫ್ಜಲ್ಗುಂಜ್ ತಲುಪಿದ್ದರು.
- Advertisement -