- Advertisement -
![]()
- Advertisement -
ಬೆಳ್ತಂಗಡಿ; ದಿನಾಂಕ 3/8/2024 ರಂದು ಸ.ಉ.ಹಿ.ಪ್ರಾ.ಶಾಲೆ ಅಣಿಯೂರು-ಕಕ್ಕಿಂಜೆ ಇಲ್ಲಿ ಶಾಲಾಭಿವೃದ್ಡಿ ಸಮಿತಿ ಹಾಗೂ ಹಳೆ ವಿದ್ಯಾರ್ಥಿ ಸಂಘದ ಸಭೆ ನಡೆಯಿತು.ಈ ಸಭೆಯಲ್ಲಿ ಈ ಭಾರಿ ಶಾಲೆಯಲ್ಲಿ ನಡೆಯುವ 77 ನೇ ಸ್ವಾತಂತ್ರೋತ್ಸವದಲ್ಲಿ 77 ಮಂದಿ ವಿಶೇಷ ಗಣ್ಯರನ್ನು ಆಹ್ವಾನಿಸಲು ತೀರ್ಮಾನಿಸಲಾಯಿತು. ವಿಶೇಷ ಗಣ್ಯರಲ್ಲಿ ಹಳೆ ವಿದ್ಯಾರ್ಥಿಗಳು,ಊರಿನ ಪ್ರಮುಖರು,ಶಿಕ್ಷಣದಲ್ಲಿ ಪ್ರಗತಿ ಕಂಡವರು ಇರಲಿದ್ದಾರೆ.

ಈ ಸಭೆಯಲ್ಲಿ ಶಾಲಾಭಿವೃದ್ಡಿ ಸಮಿತಿಯ ಅಧ್ಯಕ್ಷರಾದ ಶ್ರೀಯುತ ಅಬ್ದುಲ್ ಖಾದರ್ ಮತ್ತು ಪದಾದಿಕಾರಿಗಳು ಮತ್ತು ಹಳೆ ವಿದ್ಯಾರ್ಥಿ ಸಂಘದ ಪದಾದಿಕಾರಿಗಳಾದ ನವಾಜ್ ಷರೀಫ್ ,ರಹೀಮ್ ಮೆಂಬರ್ ಮತ್ತಿತರು ಉಪಸ್ಥಿತರಿದ್ದರು.ಈ ಸಭೆಯಲ್ಲಿ ಶಾಲೆಯ ಪ್ರಭಾರ ಮುಖ್ಯ ಶಿಕ್ಷರಾದ ಶ್ರೀಮತಿ ಸೌಜನ್ಯ ಕೆ.ಟಿ ಸ್ವಾಗತಿಸಿ, ಸಹ ಶಿಕ್ಷರಾದ ಮಂಜ್ಯಾನಾಯ್ಕ್ ನಿರೂಪಿಸಿ ಧನ್ಯವಾದ ತಿಳಿಸಿದರು.
- Advertisement -


