Friday, May 3, 2024
Homeಕರಾವಳಿಮಂಗಳೂರುಮಂಗಳೂರು : 20 ಮಂದಿ ಪಿಎಸ್ಐ ಗಳ ವರ್ಗಾವಣೆ: ಬೆಳ್ತಂಗಡಿ ಮತ್ತು ಪುಂಜಾಲಕಟ್ಟೆ ಪಿಎಸ್ಐ ಗಳು ವರ್ಗಾವಣೆ

ಮಂಗಳೂರು : 20 ಮಂದಿ ಪಿಎಸ್ಐ ಗಳ ವರ್ಗಾವಣೆ: ಬೆಳ್ತಂಗಡಿ ಮತ್ತು ಪುಂಜಾಲಕಟ್ಟೆ ಪಿಎಸ್ಐ ಗಳು ವರ್ಗಾವಣೆ

spot_img
- Advertisement -
- Advertisement -

ಮಂಗಳೂರು  : ಪಶ್ಚಿಮ ವಲಯದ ಒಟ್ಟು 20 ಮಂದಿ ಪೊಲೀಸ್ ಪಿಎಸ್ಐ ಗಳನ್ನು ವರ್ಗಾವಣೆ ಮಾಡಿ ಪೊಲೀಸ್ ಉಪ ಮಹಾ ನಿರೀಕ್ಷಕರು ಅಮಿತ್ ಸಿಂಗ್ ಜ.9 ರಂದು ಆದೇಶ ಹೊರಡಿಸಿದ್ದಾರೆ.

ಬೆಳ್ತಂಗಡಿ ಪೊಲೀಸ್ ಠಾಣೆಯ ಪಿಎಸ್ಐ -1 ಅಗಿದ್ದ ಧನರಾಜ್ ಟಿ.ಎಂ ಅವರನ್ನು ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಪೊಲೀಸ್ ಠಾಣೆಗೆ ಪಿಎಸ್ಐ-2 ಆಗಿ ವರ್ಗಾವಣೆ ಮಾಡಿ, ಬೆಳ್ತಂಗಡಿ ಪೊಲೀಸ್ ಠಾಣೆಗೆ ಪಿಎಸ್ಐ-1 ಆಗಿ ಸುಬ್ರಮಣ್ಯ ಪೊಲೀಸ್ ಠಾಣೆಯಲ್ಲಿದ್ದ ಪಿಎಸ್ಐ -2 ಆಗಿದ್ದ ಮುರಳೀಧರ ನಾಯ್ಕ್.ಕೆ.ಜಿ ಅವರನ್ನು ನೇಮಕ ಮಾಡಲಾಗಿದೆ.

ಪುಂಜಾಲಕಟ್ಟೆ ಪೊಲೀಸ್ ಠಾಣೆಯ  ಪಿಎಸ್ಐ -2 ಆಗಿದ್ದ ಓಡಿಯಪ್ಪ ಗೌಡರನ್ನು ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ-2 ಆಗಿ ವರ್ಗಾವಣೆ ಮಾಡಿದ್ದು, ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪಿಎಸ್ಐ -1 ಅಗಿದ್ದ ಎನ್.ಕೆ.ಓಮನ ಅವರನ್ನು ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಪಿಎಸ್ಐ -2 ಆಗಿ ನೇಮಕ ಮಾಡಲಾಗಿದೆ.

- Advertisement -
spot_img

Latest News

error: Content is protected !!