- Advertisement -
- Advertisement -
ಬೆಂಗಳೂರು: ರಾಜ್ಯದಲ್ಲಿ ಕೆಲವು ದಿನಗಳಿಂದ ವಿವಾದ ಸೃಷ್ಟಿಸುತ್ತಿರುವ ಹತ್ತನೇ ತರಗತಿಯ ಇತಿಹಾಸ ಪಠ್ಯಪುಸ್ತಕದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರು ಸುದ್ದಿಗೋಷ್ಠಿ ನಡೆಸಿ, ಸ್ಪಷ್ಟೀಕರಣ ನೀಡಿದ್ದಾರೆ.
ಹತ್ತನೇ ತರಗತಿಯ ಇತಿಹಾಸ ಪಠ್ಯದಲ್ಲಿರುವ ಮಾಹಿತಿ ಹಾಗೂ ಪಠ್ಯದಿಂದ ಯಾವುದನ್ನು ಕೈ ಬಿಡಲಾಗಿದೆ ಎಂಬುದರ ಕುರಿತು ಸಚಿವರು ತಿಳಿಸಿರುವ ಮಾಹಿತಿ ಇಲ್ಲಿದೆ.
- ನಾರಾಯಣಗುರು ಪಠ್ಯವನ್ನ 10ನೇ ತರಗತಿ ಇತಿಹಾಸ ಪುಸ್ತಕದಿಂದ ಕನ್ನಡ ಪುಸ್ತಕಕ್ಕೆ ಸೇರ್ಪಡೆ ಮಾಡಲಾಗಿದೆ. ಇತಿಹಾಸ ಪುಸ್ತಕದಲ್ಲಿ ಹೆಚ್ಚು ಪಠ್ಯ ಇತ್ತು ಅನ್ನೋ ಕಾರಣಕ್ಕೆ ಕನ್ನಡ ಪಾಠಕ್ಕೆ ಸೇರ್ಪಡೆ.
- ಆರನೇ ತರಗತಿಯ ನಾರಾಯಣಗುರು ಪಠ್ಯವನ್ನು ಹಾಗೇ ಉಳಿಸಲಾಗಿದೆ.
- ಭಗತ್ ಸಿಂಗ್ ಜೊತೆ ಕ್ರಾಂತಿಕಾರರಾದ ರಾಜ್ಗುರು, ಸುಖದೇವ್ ಪಠ್ಯವನ್ನು ಸೇರ್ಪಡೆ ಮಾಡಲಾಗಿದೆ. ಚಕ್ರವರ್ತಿ ಸೂಲಿಬೆಲೆ ಅವರು ಬರೆದಿರುವ ತಾಯಿ ಭಾರತೀಯರ ಅಮರಪುತ್ರರ ಪಠ್ಯವನ್ನು ಸೇರ್ಪ ಮಾಡಲಾಗಿದೆ.
- ಡಾ.ಜಿ. ರಾಮಕೃಷ್ಣರ ಭಗತ್ ಸಿಂಗ್ ಪಠ್ಯವೂ ಕೈ ಬಿಟ್ಟಿಲ್ಲ.
- ಮೈಸೂರು ಒಡೆಯರ್ ಪಠ್ಯವನ್ನು ಬರಗೂರು ರಾಮಚಂದ್ರಪ್ಪ ಸಮಿತಿ ಕೈ ಬಿಟ್ಟಿತ್ತು. ಐದು ಪುಟ ಯುಟ್ಯೂಬ್ ಪಠ್ಯವನ್ನು 4 ಪುಟಕ್ಕೆ ಇಳಿಸಿತ್ತು. ಇದನ್ನು ಸರಿ ಮಾಡಿದ್ದೇವೆ.
- ಬರಗೂರು ಸಮಿತಿ ಒಂದು ಪುಟ ಇದ್ದ ಟಿಪ್ಪು ಸುಲ್ತಾನ್ ಪಠ್ಯವನ್ನು 6 ಪುಟಕ್ಕೆ ಹೆಚ್ಚಿಸಿತ್ತು. ಓಟ್ ಬ್ಯಾಂಕ್ಗಾಗಿ ಒಡೆಯರ್ ಪಠ್ಯ ಕೈ ಬಿಟ್ಟು ಟಿಪ್ಪು ಸುಲ್ತಾನ್ ಪಠ್ಯ ಸೇರ್ಪಡೆ ಮಾಡಿತ್ತು. ಟಿಪ್ಪು ವೈಭವೀಕರಣವನ್ನು ಸರಿ ಮಾಡಿದ್ದೇವೆ. ತಪ್ಪು ಸರಿ ಮಾಡಲಾಗಿದೆ.
- ಪೆರಿಯಾರ್ ಪಠ್ಯ ಕೈಬಿಟ್ಟಿಲ್ಲ, ರಾಮನ ಬಗ್ಗೆ ಆಕ್ಷೇಪಾರ್ಹ ಮತ್ತು ರಾವಣರ ಪರ ಇದ್ದ ಸಾಲುಗಳನ್ನ ತೆಗೆಯಲಾಗಿದೆ.
- ಕುವೆಂಪು ಪಾಠವನ್ನು ನಾವು ಬದಲಾವಣೆ ಮಾಡಿಯೇ ಇಲ್ಲ. ಬರಗೂರು ಸಮಿತಿ ಕುವೆಂಪು ಪಾಠವನ್ನು ಕೈ ಬಿಟ್ಟಿತ್ತು. ನಾವು ಹೆಚ್ಚುವರಿಯಾಗಿ ಎರಡು ಪಾಠ ಸೇರ್ಪಡೆ ಮಾಡಿದ್ದೇವೆ.
- ಕುವೆಂಪು ಅವರ ರಾಮಾಯಣ ದರ್ಶನಂ ಪಠ್ಯದಲ್ಲಿ ಸೇರ್ಪಡೆ ಮಾಡಲಾಗಿದೆ.
- ಇತಿಹಾಸದ ಬಗ್ಗೆ ಬರಗೂರು ರಾಮಚಂದ್ರಪ್ಪ ತ ಮಾಹಿತಿ ಕೊಟ್ಟಿದ್ದರು. ಅದನ್ನ ಸರಿ ಮಾಡಿದ್ದೇವೆ.
- ಟಿಪ್ಪುವಿನ ನಿಜವಾದ ಮುಖವಾಡವನ್ನ ಪಠ್ಯದಲ್ಲಿ ಸೇರಿಸಿದ್ದೇವೆ.
- ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದ, ಸಂಗೊ ರಾಯಣ್ಣ, ಮದಕರಿ ನಾಯಕ, ಕಿತ್ತೂರು ಚೆನ್ನಮ್ಮ,ರಾಣಿ ಅಬ್ಬಕ್ಕ ಅವರನ್ನು ಬರಗೂರು ಸಮಿತಿ ಪಠ್ಯದಿಂದ ಕೈ ಬಿಟ್ಟಿತ್ತು. ಅವನ್ನು ಸೇರ್ಪಡೆ ಮಾಡಿದ್ದೇವೆ.
- ಹಿಂದೂ ಮಹಾಸಾಗರವನ್ನು ಇಂಡಿಯನ್ ಓಷನ್ ಅಂತ ಬದಲಾವಣೆ ಮಾಡಿದ್ರು. ಅದನ್ನು ಸರಿ ಮಾಡಿದ್ದೇವೆ.
- ಬರಗೂರು ರಾಮಚಂದ್ರಪ್ಪ ಸಮಿತಿ ಅಂಬೇಡ್ಕರ, ಮಹಾತ್ಮ ಗಾಂಧಿಯವರ ಪಠ್ಯವನ್ನ ತೆಗೆದು ಹಾಕಿತ್ತು. ಅದನ್ನು ಸೇರಿಸಲಾಗಿದೆ.
- ವಿವೇಕಾನಂದರ ಬಗ್ಗೆ ವಿಕೃತವಾಗಿ ಬರಗೂರು ಸೇರಿಸಿದ್ದರು. ಅದನ್ನ ಸರಿ ಮಾಡಿದ್ದೇವೆ.
- ಏರುತಿಹುದು, ಹಾರುತಿಹುದು ನಮ್ಮ ಬಾವುಟ ಎಂಬ ಪಠ್ಯವನ್ನು ಬರಗೂರು ಕೈ ಬಿಟ್ಟಿದ್ದರು, ಅದನ್ನು ಸರಿ ಮಾಡಿದ್ದೇವೆ.
- ನಾಡಪ್ರಭು ಕೆಂಪೇಗೌಡರನ್ನು ಬರಗೂರು ಕೈ ಬಿಟ್ಟಿದ್ದರು, ಅದನ್ನು ಸೇರಿಸಿದ್ದೇವೆ.
- ಚರ್ಚ್, ದೇವಾಲಯಗಳ ಬಗ್ಗೆ ಪಠ್ಯ ಇತ್ತು. ಅಲ್ಲಿ ದೇವಾಲಯ ಫೋಟೋವೇ ಇರಲಿಲ್ಲ. ಅದನ್ನು ಮಾಡಿದ್ದೇವೆ.
- ಬರಗೂರು ಸಮಿತಿ ಸಿಂಧೂ ನಾಗರಿಕತೆಯನ್ನು ಪಠ್ಯದಿಂದ ಕೈ ಬಿಟ್ಟಿತ್ತು. ಅದನ್ನು ಸೇರ್ಪಡೆ ಮಾಡಿದ್ದೇವೆ.
- ಮೊಘಲರು, ಬ್ರಿಟಿಷರ ವಿರುದ್ಧ ಹೋರಾಡಿದ ವೀರರ ಬಗ್ಗೆ ಪಠ್ಯದಲ್ಲಿ ಸೇರಿಸಲಾಗಿದೆ.
- Advertisement -