Saturday, June 28, 2025
Homeಕರಾವಳಿಮಂಗಳೂರುಮಂಗಳೂರು: ತೋಟಬೆಂಗ್ರೆಯ ಬೀಚ್ ಬಳಿ ಯುವಕನ ಕೊಲೆ

ಮಂಗಳೂರು: ತೋಟಬೆಂಗ್ರೆಯ ಬೀಚ್ ಬಳಿ ಯುವಕನ ಕೊಲೆ

spot_img
- Advertisement -
- Advertisement -

ಮಂಗಳೂರು: ಬಾಗಲಕೋಟೆ ಮೂಲದ ಯುವಕನೊಬ್ಬನನ್ನು ಹರಿತವಾದ ಆಯುಧದಿಂದ ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ಪಣಂಬೂರು ಪೊಲೀಸ್ ಠಾಣೆ ವ್ಯಾಪ್ತಿಯ ತೋಟಬೆಂಗ್ರೆಯ ಬೀಚ್ ಬಳಿ ನಡೆದಿದೆ.

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಮುತ್ತು ಬಸವರಾಜ ವಡ್ಡರ್ (39) ಮೃತ ಯುವಕ.

ಈತ ಎರಡು ವಾರದ ಹಿಂದೆ ಕೂಲಿ ಕೆಲಸ ಅರಸಿಕೊಂಡು ಬಂದಿದ್ದ ಎನ್ನಲಾಗಿದೆ. ಈತನಿಗೆ ಯಾರೋ ಹಲ್ಲೆ ನಡೆಸಿ ಕೊಲೆಗೈದಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!