Thursday, May 2, 2024
Homeಕರಾವಳಿನಡೆದಾಡಲು ಕಷ್ಟ ಪಡುತ್ತಿದೆ ಕುಕ್ಕೆ ಸುಬ್ರಮಣ್ಯದ ಆನೆ ; ಎಲ್ಲರ ನೆಚ್ಚಿನ ಆನೆ ಯಶಸ್ವಿಗೆ ಆಗಿದ್ದೇನು?

ನಡೆದಾಡಲು ಕಷ್ಟ ಪಡುತ್ತಿದೆ ಕುಕ್ಕೆ ಸುಬ್ರಮಣ್ಯದ ಆನೆ ; ಎಲ್ಲರ ನೆಚ್ಚಿನ ಆನೆ ಯಶಸ್ವಿಗೆ ಆಗಿದ್ದೇನು?

spot_img
- Advertisement -
- Advertisement -

ಸುಬ್ರಮಣ್ಯ; ಕುಕ್ಕೆಗೆ ಬರುವ ಭಕ್ತರ ಪ್ರಮುಖ ಆಕರ್ಷಣೆಗಳಲ್ಲಿ ಒಂದು ಆನೆ ಯಶಸ್ವಿ. ಅದರ ತುಂಟಾಟವನ್ನು ನೋಡೋದೇ ಕಣ್ಣಿಗೊಂದು ಹಬ್ಬ. ತುಂಟಾಟದಿಂದಲೇ ಗಮನ ಸೆಳೆಯುವ ಈ ಆನೆ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದೆ. ಇದೇ ಯಶಸ್ವಿ ಈಗ ನಡೆದಾಡೋಕು ಪರದಾಡುತ್ತಿದೆ.

ಹೌದು. ನಿನ್ನೆ ಮಧ್ಯಾಹ್ನ ಆದಿ ಸುಬ್ರಮಣ್ಯ ಬಳಿ ಸಾಗುತ್ತಿದ್ದಾಗ ಯಶಸ್ವಿ ಡ್ರೈನೇಜ್ ಗಾಗಿ ಹಾಕಿದ್ದ ಕಲ್ಲಿನ ಮೇಲೆ ಕಾಲಿಟ್ಟಿದೆ. ಈ ವೇಳೆ ಕಲ್ಲು ತುಂಡಾಗಿ ಬಿದ್ದು ಅದರ ಕೈಗೆ ಗಾಯವಾಗಿದ್ದು ನಡೆದಾಡಲು ಕಷ್ಟಪಡುತ್ತಿದೆ. ಈಗಾಗಲೇ ಮೈಸೂರಿನ ತಜ್ಞ ವೈದ್ಯರು ಬಂದು ಆನೆಗೆ ಚಿಕಿತ್ಸೆ ನೀಡಿದ್ದು ಸದ್ಯ ಯಶಸ್ವಿ ಚಿಕಿತ್ಸೆಗೆ ಸ್ಪಂದಿಸುತ್ತಿದೆ ಎನ್ನಲಾಗಿದೆ. ಯಶಸ್ವಿಯ ಸ್ಥಿತಿ ಅದರ ಅಭಿಮಾನಿಗಳಲ್ಲಿ ಬೇಸರ ತರಿಸಿದ್ದು ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತಿದ್ದಾರೆ.

- Advertisement -
spot_img

Latest News

error: Content is protected !!