ಶಿವಪ್ರಭಾ ಯಕ್ಷ ವಿಶ್ವ ಬಳಗ ಶಿವಪುರ ಇವರು ಆಶ್ರಮದ ನಿವಾಸಿಗಳ ಸಂತೋಷಕ್ಕಾಗಿ ನಡೆಸಿಕೊಂಡು ಬರುತ್ತಿರುವ ಸರಣಿ ಯಕ್ಷಗಾನ ಕಾರ್ಯಕ್ರಮದ 6 ನೇ ಕಾರ್ಯಕ್ರಮದ ಅಂಗವಾಗಿ ಶ್ರೀ ಕೃಷ್ಣ ವೃದ್ಧರ ಆಶ್ರಯಧಾಮ (ರಿ)ಮೂಡಬೆಟ್ಟು ಕೊಡವೂರು ಇಲ್ಲಿ ಜಾ0ಬವತಿ ಕಲ್ಯಾಣ ಎಂಬ ಯಕ್ಷಗಾನವನ್ನು ಶ್ರೀ ರತ್ನಾಕರ ಶೆಣೈಯವರ ನಿರ್ದೇಶನದಲ್ಲಿ ನಡೆಸಿಕೊಟ್ಟರು.

ಪೂಜ್ಯ ಶ್ರೀ ಗಿರಿಯಪ್ಪನವರ ಮೂರನೇ ವರ್ಷದ ಪುಣ್ಯ ಸ್ಮರಣೆಯ ಪ್ರಯುಕ್ತ ಶ್ರೀ ಸಿದ್ಧಾರ್ಥ ನಾರಾಯಣ ಬೆಂಗಳೂರು ಇವರ ಪ್ರಾಯೋಜಕತ್ವದಲ್ಲಿ ಈ ಯಕ್ಷಗಾನವು ನಡೆಯಿತು.ಆಶ್ರಮದ ಪರವಾಗಿ ಸಂಚಾಲಕರಾದ ಕೊರಂಗ್ರಪಾಡಿ ಶ್ರೀ ಕೃಷ್ಣಮೂರ್ತಿ ಆಚಾರ್ಯ ದಂಪತಿಗಳು ಕಲಾವಿದರನ್ನು ಸ್ವಾಗತಿಸಿ ಗೌರವಿಸಿದರು.ಈ ಸಂದರ್ಭದಲ್ಲಿ ತು. ಶಿ. ಮಾ. ಮ ಉಡುಪಿ ಇದರ ಅಧ್ಯಕ್ಷರಾದ ಶ್ರೀ ರವಿಪ್ರಕಾಶ್ ಭಟ್ ಹಿರಿಯ ಸದಸ್ಯ ಶ್ರೀ ಮಂಜುನಾಥ ರಾವ್ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಯಕ್ಷಗಾನ ಕಾರ್ಯಕ್ರಮವನ್ನು ವೀಕ್ಷಿಸಿದ ಆಶ್ರಮವಾಸಿಗಳು ಬಹಳ ಸಂತೋಷಪಟ್ಟು ಕಲಾವಿದರನ್ನು ಆಶೀರ್ವದಿಸಿದರು. ಕೊನೆಯಲ್ಲಿ ತು. ಶಿ. ಮಾ. ಮ ಉಡುಪಿ ಇದರ ಕಾರ್ಯದರ್ಶಿ ಜಯರಾಮ ಆಚಾರ್ಯ ಸರ್ವರಿಗೂ ಧನ್ಯವಾದವಿತ್ತರು. ಉಪಾಹಾರದೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು