- Advertisement -
- Advertisement -
ಮಂಗಳೂರು: ಕೆನರಾ ಬ್ಯಾಂಕ್ ಲೀಡ್ ಬ್ಯಾಂಕ್ ದಕ್ಷಿಣ ಕನ್ನಡ ವತಿಯಿಂದ “ವಿಶ್ವ ಪರಿಸರ ದಿನಾಚರಣೆ ” ಕಾರ್ಯಕ್ರಮವನ್ನು ಬ್ಯಾಂಕ್ ಆವರಣದಲ್ಲಿ ಆಚರಿಸಲಾಯಿತು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಡಾ. ಉನ್ನಿಕೃಷ್ಣನ್ , Dean KMC ಆಸ್ಪತ್ರೆ ಮಂಗಳೂರು ಇವರು ಭಾಗವಹಿಸಿ ಸಸಿ ನೆಟ್ಟು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಈ ವರ್ಷ ವಿಶ್ವ ಪರಿಸರ ದಿನದ ಥೀಮ್ – ಭೂಮಿ ಪುನಃಸ್ಥಾಪನೆ, ಮರುಭೂಮೀಕರಣ ಮತ್ತು ಬರ ಸ್ಥಿತಿಸ್ಥಾಪಕತ್ವ . ಕಾರ್ಯಕ್ರಮದಲ್ಲಿ ಶ್ರೀಮತಿ ಕವಿತಾ ಎನ್ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲೆಯ ಲೀಡ್ ಬ್ಯಾಂಕ್ ಮುಖ್ಯ ಪ್ರಬಂಧಕರು , ಶ್ರೀ ರೆಜಿ ಆರ್.ಆರ್ ಕೆನರಾ ಬ್ಯಾಂಕ್ ಹಂಪನಕಟ್ಟೆ ll ಶಾಖೆಯ ಮುಖ್ಯ ಪ್ರಬಂಧಕರು , ಲತೇಶ್.ಬಿ ಎಫ್ ಎಲ್ ಕೌನ್ಸಿಲರ್ ಅಮೂಲ್ಯ ಮಂಗಳೂರು, ಕೆನರಾ ಬ್ಯಾಂಕ್ ಸಿಬ್ಬಂದಿ ಸೇರಿದಂತೆ ಬ್ಯಾಂಕ್ ಗ್ರಾಹಕರು ಭಾಗವಹಿಸಿದರು
- Advertisement -