- Advertisement -
- Advertisement -
ಬೆಳ್ತಂಗಡಿ : ಕಾಡಾನೆಗಳ ಹಾವಳಿ ಬೆಳ್ತಂಗಡಿ ತಾಲೂಕಿನ ಹಲವೆಡೆ ಹೆಚ್ಚಾಗಿದ್ದು. ಡಿಸೆಂಬರ್ 6 ರಂದು ರಾತ್ರಿ ಕೂಡ ಧರ್ಮಸ್ಥಳದ ಸುತ್ತಮುತ್ತ ತೋಟಕ್ಕೆ ನುಗ್ಗಿ ತೆಂಗಿನ ಮರಗಳನ್ನು ನಾಶ ಮಾಡಿ ಹೋಗಿದೆ.
ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಮುಳಿಕ್ಕರ್ ಕೊಲ್ಪೆಯ ಸುತ್ತಮುತ್ತಲಿನ ಪ್ರದೇಶಕ್ಕೆ ಡಿಸೆಂಬರ್ 6 ರಂದು ರಾತ್ರಿ 11:30ರ ಸುಮಾರಿಗೆ ಲಗ್ಗೆ ಇಟ್ಟಿದ್ದು ಅಲ್ಲಿಯೇ ಇದ್ದ ವಿಜಯ ಶೆಟ್ಟಿ ಎಂಬವರ ತೋಟಕ್ಕೆ ನುಗ್ಗಿ ತೆಂಗಿನ ಮರಗಳನ್ನು ನಾಶಮಾಡಿದೆ. ಸ್ಥಳೀಯರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು ಅದರಂತೆ ಬೆಳ್ತಂಗಡಿ ಅರಣ್ಯಾಧಿಕಾರಿಗಳ ತಂಡ ಸ್ಥಳಕ್ಕೆ ಬಂದು ಸ್ಥಳೀಯರ ಸಹಕಾರದೊಂದಿಗೆ ಎರಡು ಕಾಡಾನೆಯನ್ನು ಕಾಡಿಗೆ ಓಡಿಸಿದ್ದಾರೆ.
- Advertisement -