ಬೆಳ್ತಂಗಡಿ: ಇಲ್ಲಿನ ನಿವಾಸಿ ಅಬ್ದುಲ್ಜಲೀಲ್ ಅವರು ತನ್ನ ಕುಟುಂಬಸ್ಥರೊಂದಿಗೆ ಪ್ರಯಾಣ ಮಾಡುತ್ತಿದ್ದ ವೇಳೆ ಲಾಯಿಲಾ ಜಂಕ್ಷನ್ ಬಳಿ ಗ್ಯಾರೇಜ್ ನಲ್ಲಿರುವಾಗಲೇ ಕಾರಿನಲ್ಲಿದ್ದ ನಗದು, ಚಿನ್ನಾಭರಣ ಹಾಗು ಬಟ್ಟೆಗಳನ್ನು ಕಳವು ಮಾಡಿದ ಘಟನೆ ನಡೆದಿದೆ.
ಪ್ರಕರಣದ ಪಿರ್ಯಾದಿದಾರರಾದ ಚಿಬಿದ್ರೆ ಮನೆ ಮತ್ತು ಗ್ರಾಮ ಬೆಳ್ತಂಗಡಿ ಅಬ್ದುಲ್ಜಲೀಲ್ ಎಂಬವರ ದೂರಿನಂತೆ, ಸದ್ರಿಯವರು ದಿನಾಂಕ: 04.12.2023 ರಂದು ತನ್ನ ಹೆಂಡತಿ ಮತ್ತು 4 ಜನ ಮಕ್ಕಳು ಹಾಗೂ ಪಿಯಾದಿದಾರರ ತಂಗಿಯೊಂದಿಗೆ ಕೆಎ 17 3215 ನೇದರ ವಾಹನದಲ್ಲಿ ಪ್ರಯಾಣ ಮಾಡಿ, ಲಾಯಿಲಾ ಜಂಕ್ಷನ್ ಬಳಿ ಗ್ಯಾರೇಜ್ ನಲ್ಲಿರುವಾಗ ಮದ್ಯಾಹ್ನ ಸಮಯ, ಪಿರ್ಯಾದಿದಾರರ ಕಾರಿನಲ್ಲಿ ರೂ 1,500/- ನಗದು ಹಣ, ಮಕ್ಕಳ ಬಟ್ಟೆ ಹಾಗೂ ರೂ 3,34,400 ಮೌಲ್ಯದ ಒಟ್ಟು 88 ಗ್ರಾಂ ಚಿನ್ನಾಭರಣಗಳಿದ್ದ ಬ್ಯಾಗನ್ನು ಯಾರೋ ಕಳ್ಳರು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ 117/2023 ಕಲಂ; 379 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ