- Advertisement -
- Advertisement -
ಬೆಳ್ತಂಗಡಿ : ತಮಿಳು ನಟ ವಿಶಾಲ್ ಇಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥನ ದರ್ಶನ ಪಡೆದರು, ವಿಶಾಲ್ ಜೊತೆ ಸ್ನೇಹಿತರು ಕೂಡ ಇದ್ದರು. ವಿಶಾಲ್ ಭೇಟಿ ನೀಡಿರುವ ವಿಚಾರ ಭಕ್ತರಿಗೆ ತಿಳಿದು ಸೆಲ್ಫಿಗೆ ಮುಗಿಬಿದ್ದು ಫೋಟೋ ತೆಗೆಸಿಕೊಂಡರು.

ವಿಶಾಲ್ ಸದ್ಯ ವಿಶಾಲ್, ಲಾಠಿ, ತುಪ್ಪರಿವಾಲನ್ 2 ಮತ್ತು ಮಾರ್ಕ್ ಆಂಟನಿ ಸೇರಿದಂತೆ ಮುಂತಾದ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಕಾಶಿಗೆ ತೆರಳಿ ಕಾಶಿ ವಿಶ್ವನಾಥನ ದರ್ಶನ ಮಾಡಿ ಗಂಗಾನದಿಯಲ್ಲಿ ಮಿಂದೆದ್ದಿದ್ರು. ಅಲ್ಲದೆ, ಕಾಶಿಯ ಸೌಂದರ್ಯ ಹಾಗೂ ಪಾವಿತ್ರ್ಯತೆ ಕಾಪಾಡಿದ್ದಕ್ಕೆ ಪ್ರಧಾನಿ ಮೋದಿಯವರಿಗೆ ಟ್ಟೀಟ್ ಮೂಲಕ ಧನ್ಯವಾದಗಳನ್ನು ತಿಳಿಸಿ ಗಮನ ಸೆಳೆದಿದ್ರು.
- Advertisement -