ಮಂಗಳೂರು: ಮಂಗಳೂರಿನ ಹಿಂದೂ ಯುವತಿಯೊಬ್ಬಳು ಮುಸ್ಲಿಂ ಯುವಕನನ್ನು ಮದುವೆಯಾಗಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿರುವುದರ ವಿಷಯ ಜಾಲತಾಣಗಳಲಗಲ್ಲಿ ಹರಿದಾಡುತ್ತಿತ್ತು. ಈ ಬಗ್ಗೆ ತಿಳಿದ ಗುರುಪುರ ವಜ್ರದೇಹಿ ಮಠದ ಸ್ವಾಮೀಜಿಯವರು ಹಿಂದೂ ಪರಿವಾರ ಸಂಘಟನೆಗಳ ಮುಖಂಡರ ಜೊತೆಗೆ ಯುವತಿಯ ಮನೆಗೆ ನ.20 ರಂದು ಭೇಟಿ ನೀಡಿದರು.
ಪ್ರಸ್ತುತ ಎಂಬಿಬಿಎಸ್ ವಿದ್ಯಾಭ್ಯಾಸ ಮಾಡುತ್ತಿರುವ ಯುವತಿ ಮೇಘ ಮತ್ತು ಆಕೆಯ ತಂದೆ ತಾಯಿ ಹಾಗೂ ಚಿಕ್ಕಮ್ಮನ ಸಮ್ಮುಖದಲ್ಲಿ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಮಾತುಕತೆ ನಡೆಸಿ ಯುವತಿ ಹಾಗೂ ಮನೆಯವರ ಜತೆ ಕೆಲ ಗಂಟೆಗಳ ಕಾಲ ವಿವರವಾಗಿ ಚರ್ಚಿಸಿದ್ದಾರೆ. ಜೊತೆಗೆ ಯುವತಿ ಮತ್ತು ಆಕೆಯ ಮನ ಪರಿವರ್ತನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಹಿಂದೂ ಯುವತಿಯಾಗಿ ಮುಸ್ಲಿಂ ಯುವಕನನ್ನು ಮದುವೆಯಾಗಿ ಇನ್ನೊಂದು ಧರ್ಮಕ್ಕೆ ಮತಾಂತರ ಆದರೆ ಮುಂದಾಗುವ ಕಷ್ಟಗಳ ಬಗ್ಗೆ ವಿವರಣಾತ್ಮಕವಾಗಿ ತಿಳಿಸಿದ್ದಾರೆ. ಬಳಿಕ ಜೀವನದಲ್ಲಿ ಎದುರಿಸಬೇಕಾದ ನೋವುಗಳು ಹಾಗೂ ಈಗಾಗಲೆ ಮತಾಂತರ ಹೊಂದಿದ ಮಹಿಳೆಯರಿಗೆ ಆಗಿರುವ ಪರಿಸ್ಥಿತಿಯ ಬಗ್ಗೆ ವಿವರವಾಗಿ ತಿಳಿಸಿದರು. ಅದರ ಪರಿಣಾಮವಾಗಿ ಯುವತಿ ಜೊತೆ ಆಕೆಯ ಮನೆಯವರು ಸತ್ಯ ವಿಷಯಗಳನ್ನು ಅರಿತು ಸ್ವಾಮೀಜಿಗಳ ಮಾತಿಗೆ ಉತ್ತಮ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ಗುರುಪುರ ಶ್ರೀಗಳು ‘ನಮ್ಮ ಮಾತಿಗೆ ಯುವತಿ ಉತ್ತಮವಾಗಿ ಸ್ಪಂದಿಸಿದ್ದಾರೆದ್ದಾರೆ, ಆಕೆಯ ಗುಣನಡತೆ ಉತ್ತಮವಾಗಿದ್ದು, ಉತ್ತಮ ಮನೆತನ ಕೂಡ ಆದ ಕಾರಣ ಈ ಮಾತುಕತೆಗೆ ಸಕಾರಾತ್ಮಕವಾಗಿ ಯಶಸ್ವಿಯಾಗಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಮುಖಂಡರಾದ ಶರಣ್ ಪಂಪ್ವೆಲ್, ಶಿವಾನಂದ, ಭುಜಂಗ ಕುಲಾಲ್ ಹಾಗು ಕಾರ್ಪೋರೇಟರ್ ದಿವಾಕರ್ ಪಾಂಡೇಶ್ವರ್ ಮತ್ತಿತರು ಉಪಸ್ಥಿತರಿದ್ದರು.