Friday, April 26, 2024
Homeಕರಾವಳಿಆಶಾಕಾರ್ಯಕರ್ತರ‌ ಮೇಲಿನ ಹಲ್ಲೆ ನಿಜಕ್ಕೂ ಖಂಡನೀಯ : ಯು.ಟಿ ಖಾದರ್

ಆಶಾಕಾರ್ಯಕರ್ತರ‌ ಮೇಲಿನ ಹಲ್ಲೆ ನಿಜಕ್ಕೂ ಖಂಡನೀಯ : ಯು.ಟಿ ಖಾದರ್

spot_img
- Advertisement -
- Advertisement -

ಬೆಂಗಳೂರಿನ ಸಾದಿಕ್ ಪಾಳ್ಯದಲ್ಲಿ ಕೊರೊನ ಶಂಕಿತರ ತಪಾಸಣೆಗಾಗಿ ತೆರಳಿದ್ದ ಆಶಾಕಾರ್ಯಕರ್ತೆಯ ಮೇಲಿನ ಹಲ್ಲೆಯನ್ನು ಮಂಗಳೂರು ಕ್ಷೇತ್ರದ ಶಾಸಕ ಮತ್ತು ಮಾಜಿ ಅರೋಗ್ಯ ಸಚಿವ ಯು.ಟಿ.ಖಾದರ್ ತೀವ್ರವಾಗಿ ಖಂಡಿಸಿದ್ದಾರೆ.

ರಾಜ್ಯದಲ್ಲಿ ಪ್ರತಿ ಕ್ಷಣವೂ ಜನರ ಹಿತಾಸಕ್ತಿಗಾಗಿ ದುಡಿಯುವ ವರ್ಗದಲ್ಲಿ ಆಶಾ ಕಾರ್ಯಕರ್ತೆಯರು ಮುಂಚೂಣಿಯಲ್ಲಿದ್ದಾರೆ. ಎಂದಿಗೂ ಜನರ ಹಿತಾಸಕ್ತಿಗೆ ನೋವುಂಟು ಮಾಡುವ ಕೆಲಸವನ್ನು ಆಶಾ ಕಾರ್ಯಕರ್ತೆಯರು ಮಾಡಿಲ್ಲ. ಅವರು ನಮ್ಮ ಕುಟುಂಬದ ಒಳಿತಿಗಾಗಿ ಬಂದು ಆರೋಗ್ಯದ ಕುರಿತು ಮಾಹಿತಿ ಕೇಳಿದರೆ ಅವರಿಗೆ ಸ್ಪಂದಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಖಾದರ್ ಹೇಳಿದರು.
ನೀವೇ ಖುದ್ದಾಗಿ ಬಂದು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ. ಕೋವಿಡ್-19 ಸೋಂಕಿನಿಂದ ಇಡೀ ಜಗತ್ತು ಆತಂಕದಲ್ಲಿದೆ. ಹಿಂದೆಂದೂ ನಾವು ಇಂತಹ ಪರಿಸ್ಥಿತಿ ಎದುರಿಸಿರಲಿಲ್ಲ. ಇಂತಹಾ ಸಂಧರ್ಭದಲ್ಲಿ ನಾವು ಜಾತಿ, ಧರ್ಮ ಬೇಧ ಭಾವ ಮಾಡದೇ ಇದರ ವಿರುಧ್ಧ ಹೋರಾಡಬೇಕಿದೆ ಎಂದು ಯು.ಟಿ ಖಾದರ್ ತಮ್ಮ ಸಮಾಜ ಬಾಂಧವರ ಬಳಿ ಮನವಿ ಮಾಡಿಕೊಂಡಿದ್ದಾರೆ

ತಲಪಾಡಿ ಗ್ರಾಮದ ಅಂಬೇಡ್ಕರ್ ಕಾಲನಿಗೆ ಭೇಟಿ ನೀಡಿ ಕೋರೋನಾ ಜನ ಜಾಗೃತಿಯ ಬಗ್ಗೆ ಅರಿವು ಮೂಡಿಸಿ ನಾಗರಿಕರೊಂದಿಗೆ ಸಮಾಲೋಚನೆ ನಡೆಸಿದ ಸಂದರ್ಭ,ಈ ಸಂದರ್ಭದಲ್ಲಿ ಕಾಂಗ್ರೆಸ್ ವತಿಯಿಂದ ನೀಡಲಾದ ರೇಷನ್ ಕಿಟ್ ಬಗ್ಗೆ ಸಾರ್ವಜನಿಕರು ಧನ್ಯವಾದ ಸಲ್ಲಿಸಿದರು.

Posted by UT Khader on Thursday, 2 April 2020

- Advertisement -
spot_img

Latest News

error: Content is protected !!