ಮಂಗಳೂರು:ಭಕ್ತರಿಗೆ ಉಪಯೋಗಿಸಿದ ಸೀರೆ ಕೊಟ್ಟು ಮೋಸ ಮಾಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.ನಗರದ ಹಂಪನ್ ಕಟ್ಟೆ ಬಳಿಯಿರುವ ಬಟ್ಟೆ ಅಂಗಡಿ ಎಂ.ಪಿ ಸಿಲ್ಕ್ ನಲ್ಲಿ ಈ ಮೋಸ ನಡೆದಿದೆ.ಅಂಗಡಿಗೆ ಬಂದಿದ್ದ ಗೆಜ್ಜೆಗಿರಿ ಅಡಳಿತ ಸಮಿತಿ ಸದಸ್ಯರು ಸೀರೆಯನ್ನು ವಾಪಸ್ಸು ತಂದು ಅಂಗಡಿ ಮಾಲೀಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮಾಚ್೯ 1 ರಿಂದ 5 ತನಕ ಗೆಜ್ಜೆಗಿರಿ ಕ್ಷೇತ್ರದಲ್ಲಿ ವಾರ್ಷಿಕ ಉತ್ಸವ ನಡೆದಿತ್ತು. ಈ ಸಂದರ್ಭದಲ್ಲಿ ಸುಮಾರು 8 ರಿಂದ 9 ಸಾವಿರ ಸೀರೆಯನ್ನು ಗೆಜ್ಜೆಗಿರಿ ಅಡಳಿತ ಮಂಡಳಿ ಭಕ್ತರಿಗೆ ಉಚಿತವಾಗಿ ನೀಡಲು ಖರೀದಿ ಮಾಡಲಾಗಿತ್ತು. ಗೆಜ್ಜೆಗಿರಿ ಕ್ಷೇತ್ರದ ಅಧ್ಯಕ್ಷ ರವಿ ಪೂಜಾರಿ ಮಾತನಾಡಿ ತುಳುನಾಡಿನ ಹೆಸರುವಾಸಿಯಾದ ಗೆಜ್ಜೆಗಿರಿ ಕ್ಷೇತ್ರ ತಾಯಿಯ ಸಂಕಲ್ಪದಂತೆ ಮಡಿಲ ಪ್ರಸಾದ ರೂಪದಲ್ಲಿ ಕರಾವಳಿಯ ಐದು ಜಿಲ್ಲೆಯ ಸುಮಾರು 8 ಸಾವಿರ ಮಹಿಳಾ ಭಕ್ತರಿಗೆ ನೀಡಲಾಗಿತ್ತು.ಸೀರೆಗೆ ಒಂದು ವಾರ ಪೂಜೆ ಸಲ್ಲಿಸಿ ಶುದ್ದಚಾರದಿಂದ ಮಹಿಳೆಯರು ಪಡೆದಿದ್ರು.ಉಪಯೋಗಿಸಿದ ಹಳೆ ಸೀರೆಯನ್ನು ಕೊಟ್ಟಿದ್ದಾರೆ ಎಂದು ಅನೇಕ ಮಹಿಳೆಯರು ನಮ್ಮ ಬಳಿ ಬಂದು ಸೀರೆಯನ್ನು ತೋರಿಸಿದ್ದಾರೆ.ಅದನ್ನು ನೋಡಿ ನಮಗೆ ಬಹಳ ನೋವಾಗಿದೆ.ಎಂಪಿ ಸಿಲ್ಕ್ ಎಂಬ ಅಂಗಡಿಯಿಂದ ನಾವು ಖರೀದಿ ಮಾಡಿದ್ದು,ತಾಯಿಂದ ಮಕ್ಕಳಿಗೆ ಕೊಡುವ ಸೀರೆ ಉಚಿತ ಹಾಗೂ ಭಕ್ತಿಪೂರಕವಾಗಿ ಕೊಡುವ ಉದ್ದೇಶ ನಮ್ಮದಾಗಿತ್ತು. ಸುಮಾರು 12 ರಿಂದ 13 ಲಕ್ಷ ರೂ ಮೌಲ್ಯದ 41 ಬಂಡಲ್ ಸೀರೆಯಲ್ಲಿ ದೊಡ್ಡ ಮಟ್ಟದ ಮೋಸ ನಡೆದಿದೆ ಎಂದು ಆರೋಪಿಸಿದ್ದಾರೆ….