ಉಪ್ಪಿನಂಗಡಿ: ಹಿಜಾಬ್ ವಿಚಾರದ ಪೋಸ್ಟೊಂದನ್ನು ವಾಟ್ಸಾಫ್ ಶೇರ್ ಮಾಡಿದ್ದಕ್ಕೆ ಯುವಕನೊಬ್ಬನಿಗೆ ಜೀವ ಬೆದರಿಕೆ ಹಾಕಿದ್ದಕ್ಕೆ ಹೆದರಿದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿ ಕೊನೆಗೆ ಕಾಲನ್ನೇ ಕಳೆದುಕೊಂಡ ಘಟನೆ ಉಪ್ಪಿನಂಗಡಿಯ ಹಿರೇಬಂಡಾಡಿಯಲ್ಲಿ ನಡೆದಿದೆ. ಹಿರೇಬಂಡಾಡಿ ಗ್ರಾಮದ ಮದ್ಮೆತ್ತಿಮಾರ್ ಎಂಬಲ್ಲಿನ ನಿವಾಸಿ ಪ್ರಶಾಂತ್ ಕಾಲು ಹಾಗೂ ಕೈ ಕಳೆದುಕೊಂಡ ಯುವಕ.
ಟ್ಯಾಂಕರ್ ಚಾಲಕನಾಗಿ ದುಡಿಯುತ್ತಿರುವ ಹಿರೇಬಂಡಾಡಿ ಗ್ರಾಮದ ಮದ್ಮೆತ್ತಿಮಾರ್ ಎಂಬಲ್ಲಿನ ನಿವಾಸಿ ಪ್ರಶಾಂತ್ (25) ಕೆಲವು ದಿನಗಳ ಹಿಂದೆ ಹಿಜಾಬ್ ವಿಚಾರವಾಗಿ ಹೈಕೋರ್ಟ್ ನೀಡಿದ ತೀರ್ಪನ್ನು ಸ್ವಾಗತಿಸಿ ವಾಟ್ಸಾಫ್ ನಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ದ. ಇದನ್ನು ನೋಡಿದ ಎಂ.ಆರ್.ಪಿ.ಎಲ್ ನ ಟ್ಯಾಂಕರ್ ಚಾಲಕ ಸಕಲೇಶಪುರ ಲೋಹಿತ್ ಎಂಬುವವರು ಪ್ರಶಾಂತ್ ಗೆ ಮಾರ್ಚ್ 29ರಂದು ಕರೆ ಮಾಡಿ ಹಿಜಾಬ್ ವಿಚಾರದ ಪೋಸ್ಟ್ ಯಾಕೆ ಶೇರ್ ಮಾಡ್ತೀಯಾ, ನಿನ್ನ ಕೈ ಕಾಲು ಕತ್ತರಿಸಿ ಟ್ಯಾಂಕರ್ ಬಿಡದ ಹಾಗೇ ಮಾಡುತ್ತೇನೆಂದು ಬೆದರಿಕೆ ಹಾಕಿದ್ದಾನೆ.
ಮರುದಿನ ಮತ್ತೆ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ.ಅಲ್ಲದೇ ಇತರೆ ಚಾಲಕರಾಗಿರುವ ಶಫೀಕ್ ಕೊಲ್ಪೆ, ಮಹಮ್ಮದ್ ಇಜಾಬ್,ಚಿದಾನಂದ,ಧನಂಜಯ್ , ಉಮೇಶ್ ಎಂಬುವರು ಕೂಡ ಕರೆ ಮಾಡಿ ಬೆದರಿಕೆ ಹಾಕಿದ್ದಾರಂತೆ.ಇದರಿಂದ ಭಯಗೊಂಡ ಯುವಕ ಮಾರ್ಚ್ 31 ರಂದು ಮಣಿಪಾಲದ ಇಂದ್ರಾಳಿ ರೈಲ್ವೇ ನಿಲ್ದಾಣದಲ್ಲಿ ಬಳಿ ಆತ್ಮಹತ್ಯೆಗೆ ಯತ್ನಿಸಿದ್ದು ಬಲಕಾಲು ಹಾಗೂ ಎಡ ಕೈ ಕಳೆದುಕೊಂಡಿದ್ದಾನೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ಯುವಕ ದೂರು ನೀಡಿದ್ದು, ಬೆದರಿಕೆ ಹಾಕಿದವರ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.