- Advertisement -
- Advertisement -
ಬೆಳ್ತಂಗಡಿ : ಭಾರಿ ಮಳೆಗೆ ನದಿಗಳಲ್ಲಿ ಉಕ್ಕಿಹರಿಯುತ್ತಿರುವ ನೀರುಗಳು ಈ ಮಧ್ಯೆ ಬೆಳ್ತಂಗಡಿ ತಾಲೂಕಿನ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಫಲ್ಗುಣಿ ನದಿಯ ಮಧ್ಯ ಭಾಗದಲ್ಲಿ ಅಪರಿಚಿತ ಗಂಡಸಿನ ಶವವೊಂದು ತೇಲಿಕೊಂಡು ಹೋಗಿರೋದನ್ನು ಸ್ಥಳೀಯರು ಗಮನಿಸಿದ್ದಾರೆ.
ಸ್ಥಳೀಯರು ಶವವನ್ನು ಎಳೆದು ಮೇಲೆ ತರಳು ಪ್ರಯತ್ನ ಪಟ್ಟರೂ ಸಾಧ್ಯವಾಗದೆ ಶವ ನೀರಲ್ಲಿ ಮುಂದೆ ಹೋಗಿದೆ. ವೇಣೂರು ಪೊಲೀಸ್ ಠಾಣೆಯಲ್ಲಿ ಯಾವುದೇ ನಾಪತ್ತೆಯಾಗಿರುವ ಪ್ರಕರಣ ದಾಖಲಾಗಿಲ್ಲ ಎನ್ನಲಾಗಿದೆ.
- Advertisement -