Wednesday, June 3, 2026
Homeಕರಾವಳಿಉಡುಪಿಉಡುಪಿ: ಗುಂಡಿ ಬಿದ್ದ ರೈಲ್ವೇ ನಿಲ್ದಾಣದ ರಸ್ತೆಯಲ್ಲಿ ಪ್ರಯಾಣಿಕರ ನಿತ್ಯ ಪರದಾಟ

ಉಡುಪಿ: ಗುಂಡಿ ಬಿದ್ದ ರೈಲ್ವೇ ನಿಲ್ದಾಣದ ರಸ್ತೆಯಲ್ಲಿ ಪ್ರಯಾಣಿಕರ ನಿತ್ಯ ಪರದಾಟ

- Advertisement -
- Advertisement -

ಉಡುಪಿ ರೈಲು ನಿಲ್ದಾಣದಿಂದ ವಿವಿಧೆಡೆಗೆ ತೆರಳುವ ಪ್ರಯಾಣಿಕರು ಇದೀಗ ಪರದಾಡುವಂತಾಗಿದೆ. ಉಡುಪಿ ರೈಲು ನಿಲ್ದಾಣಕ್ಕೆ ತೆರಳುವ ರಸ್ತೆಯ ಸಮಸ್ಯೆಯಿಂದಾಗಿ ಪ್ರಯಾಣಿಕರಿಗೆ ಪ್ರಯಾಣದ ಸಂದರ್ಭ ಸಮಸ್ಯೆಯಾಗುತ್ತಿದೆ.

ಉಡುಪಿ ರೈಲು ನಿಲ್ದಾಣಕ್ಕೆ ಹೋಗುವ 1.5 ಕಿಮೀ ರಸ್ತೆಯನ್ನು ಪ್ರಾಥಮಿಕವಾಗಿ ಎರಡು ಪಾರ್ಟಿಗಳು ನಿರ್ವಹಿಸುತ್ತವೆ. ರಸ್ತೆಯ ಮೊದಲ ಭಾಗವು ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಅಡಿಯಲ್ಲಿದೆ ಮತ್ತು ಇನ್ನೊಂದು ಭಾಗವು ರೈಲ್ವೆಗೆ ಸೇರಿದೆ. ರೈಲ್ವೇ ಇಲಾಖೆ ನಿರ್ವಹಿಸುತ್ತಿರುವ 1.3 ಕಿ.ಮೀ ರಸ್ತೆಯು ಇತ್ತೀಚಿನ ದಿನಗಳಲ್ಲಿ ಯಾವುದೇ ದುರಸ್ತಿ ಕಾರ್ಯಗಳನ್ನು ಕಂಡಿಲ್ಲ.

ದಿನಕ್ಕೆ ಸರಾಸರಿ 30 ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಈ ರಸ್ತೆಯನ್ನು ಹೋಗುತ್ತಾರೆ. ಆದರೆ ರಸ್ತೆಯ ದಯನೀಯ ಸ್ಥಿತಿ ಉಡುಪಿ ರೈಲು ನಿಲ್ದಾಣಕ್ಕೆ ಕಪ್ಪು ಚುಕ್ಕೆಯಾಗಿದೆ. ಮುಂಬೈ, ಮಡಗಾಂವ್, ತಿರುವನಂತಪುರಂ ಮತ್ತು ಉತ್ತರ ಮತ್ತು ದಕ್ಷಿಣ ಭಾರತದ ಹಲವು ಭಾಗಗಳಿಗೆ ಸಂಪರ್ಕ ಕಲ್ಪಿಸುವ ರೈಲುಗಳು ಉಡುಪಿ ನಿಲ್ದಾಣಕ್ಕೆ ಆಗಮಿಸುತ್ತವೆ. ಆದರೇ ಇಲ್ಲಿನ ರಸ್ತೆಗಳು ಹೊಂಡ ಗುಂಡಿಯಿಂದ ತುಂಬಿದೆ. ಪ್ರಯಾಣಿಕರನ್ನು ಕರೆದೊಯ್ಯುವ ಕ್ಯಾಬ್‌ಗಳು, ಆಟೋ ರಿಕ್ಷಾಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ಈ ರಸ್ತೆಯಲ್ಲೇ ಹೋಗುತ್ತವೆ.

ರೈಲ್ವೇ ಇಲಾಖೆಯ ಮೂಲಗಳ ಪ್ರಕಾರ, ಘಟನಾ ಸ್ಥಳಕ್ಕೆ ಭೇಟಿ ನೀಡಿದ ಹಿರಿಯ ಅಧಿಕಾರಿಗಳು ರಸ್ತೆಯ ಸ್ಥಿತಿಯ ಬಗ್ಗೆ ನೀಡಿದ್ದಾರೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಶೀಘ್ರದಲ್ಲೇ ಹಣ ಬಿಡುಗಡೆ ಮಾಡುವ ನಿರೀಕ್ಷೆಯಲ್ಲಿ ಇಲಾಖೆ ಇದೆ ಎಂದಿದ್ದಾರೆ.

- Advertisement -

Latest News

error: Content is protected !!