Sunday, September 20, 2026
Homeಕರಾವಳಿಉಡುಪಿಉಡುಪಿ: ನದಿಗೆ ಬಿದ್ದ ಕಾರಿನಲ್ಲಿದ್ದ ಚಾಲಕ, 3 ವರ್ಷದ ಮಗುವನ್ನು ರಕ್ಷಿಸಿದ ಮೀನುಗಾರ

ಉಡುಪಿ: ನದಿಗೆ ಬಿದ್ದ ಕಾರಿನಲ್ಲಿದ್ದ ಚಾಲಕ, 3 ವರ್ಷದ ಮಗುವನ್ನು ರಕ್ಷಿಸಿದ ಮೀನುಗಾರ

- Advertisement -
- Advertisement -

ಉಡುಪಿ: ಕೊಡವೂರು ಸಮೀಪದ ಚೆನ್ನಂಗಡಿಯಲ್ಲಿ ನಿಯಂತ್ರಣ ತಪ್ಪಿದ ಕಾರೊಂದು ನದಿಗೆ ಬಿದ್ದ ಭೀಕರ ಘಟನೆ ಸಂಭವಿಸಿದ್ದು, ಸ್ಥಳೀಯ ಮೀನುಗಾರರೊಬ್ಬರ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತವೊಂದು ತಪ್ಪಿದೆ. ನೀರು ತುಂಬುತ್ತಿದ್ದ ಕಾರಿನಲ್ಲಿದ್ದ ಚಾಲಕ ಹಾಗೂ ಮೂರು ವರ್ಷದ ಮಗುವನ್ನು ನದಿಗೆ ಧುಮುಕಿ ಸುರಕ್ಷಿತವಾಗಿ ರಕ್ಷಿಸಲಾಗಿದೆ.

ಚೆನ್ನಂಗಡಿ ಸೇತುವೆ ಸಮೀಪ ಕಾರು ಆಕಸ್ಮಿಕವಾಗಿ ನಿಯಂತ್ರಣ ತಪ್ಪಿ ನದಿಗೆ ಬಿದ್ದು ಮುಳುಗುತ್ತಿತ್ತು. ಇದನ್ನು ಗಮನಿಸಿದ ಚೆನ್ನಂಗಡಿ ಮೂಲದ ಮೀನುಗಾರ ಗಣೇಶ್, ಕ್ಷಣ ಮಾತ್ರವೂ ವಿಳಂಬ ಮಾಡದೆ ತಕ್ಷಣವೇ ನದಿಗೆ ಧುಮುಕಿದ್ದಾರೆ. ನೀರು ತುಂಬುತ್ತಿದ್ದ ಕಾರಿನೊಳಗೆ ಸಿಲುಕಿ ಪರದಾಡುತ್ತಿದ್ದ ಚಾಲಕ ಹಾಗೂ ಆತಂಕದಲ್ಲಿದ್ದ 3 ವರ್ಷದ ಎಳೆಯ ಮಗುವನ್ನು ಸಾಹಸಮಯವಾಗಿ ಹೊರತೆಗೆದು ದಂಡೆಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಾಣದ ಹಂಗು ತೊರೆದು ಇಬ್ಬರ ಪ್ರಾಣ ಉಳಿಸಿದ ಮೀನುಗಾರ ಗಣೇಶ್ ಅವರ ಧೈರ್ಯದ ಸಾಹಸ ಹಾಗೂ ಸಮಯಪ್ರಜ್ಞೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ಮತ್ತು ಶ್ಲಾಘನೆ ವ್ಯಕ್ತವಾಗಿದೆ.

- Advertisement -

Latest News

error: Content is protected !!