- Advertisement -
- Advertisement -
ಬೆಳ್ತಂಗಡಿ: ಇಲ್ಲಿನ ಕಣಿಯೂರು ಗ್ರಾಮದ ಮಲೆಂಗಲ್ಲು ಮೀಸಲು ಅರಣ್ಯದಲ್ಲಿ ಭಾರೀ ಗಾತ್ರದ ಕಲಾಂಜಿ ಮರವನ್ನು ಕಡಿಯುತ್ತಿದ್ದ ಇಬ್ಬರನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಉಪರಣ್ಯಾಧಿಕಾರಿ ಬಿ. ಜೆರಾಲ್ಡ್ ಡಿ’ಸೋಜಾ, ಅರಣ್ಯ ರಕ್ಷಕ ಜಗದೀಶ ಕೆ.ಎನ್., ಎಂ.ಎಂ. ಜಗದೀಶ, ಅರಣ್ಯ ವೀಕ್ಷಕ ರವಿ ಬಿ. ಶೇಷಪ್ಪ ಗೌಡ ಅವರು ಮರ ಸಹಿತ ಮರ ಕಡಿಯಲು ಉಪಯೋಗಿಸಿದ್ದ ವಿದ್ಯುತ್ ಯಂತ್ರ ಹಾಗೂ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ 40 ಸಾವಿರ ಎಂದು ಅಂದಾಜಿಸಲಾಗಿದೆ. ಪ್ರಕರಣದ ಮುಂದಿನ ತನಿಖೆಯನ್ನು ವಲಯಾಧಿಕಾರಿ ಮಧುಸೂದನ್ ಎ. ಅವರು ನಡೆಸಲಿದ್ದಾರೆ.
- Advertisement -