- Advertisement -
- Advertisement -
ವಿಟ್ಲ: ಕೇರಳದಿಂದ ಅಕ್ರಮವಾಗಿ ಬರುವ ಬಾಕ್ಸೆಟ್ ಮಣ್ಣು ತುಂಬಿದ ಸುಮಾರು ಎಂಟು ಲಾರಿಗಳನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ವಿಟ್ಲ ಮೂಲಕ ಅಕ್ರಮವಾಗಿ ಬಳ್ಳಾರಿ, ಸಂಡೂರಿಗೆ ಬಾಕ್ಸೆಟ್ ಸಾಗಿಸುತ್ತಿದ್ದ ಏಳು ಭಾರೀ ಸರಕು ಲಾರಿಗಳನ್ನು ವಶಕ್ಕೆ ಪಡೆದಿದ್ದಾರೆ.
ಕಲ್ಲಡ್ಕ-ಕಾಂಞಂಗಾಡ್ ಅಂತರಾಜ್ಯ ಹೆದ್ದಾರಿಯಲ್ಲಿ ಭಾರಿ ಸರಕು ಲಾರಿಗಳ ಓಡಾಟವನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಸಾರಿಗೆ ಇಲಾಖೆ ಕೆಲ ವರ್ಷಗಳ ಹಿಂದೆಯೇ ನಿಷೇಧಿಸಿದೆ. ಹೀಗಿದ್ದರೂ ಅಧಿಕಾರಿಗಳ ಕೃಪಾಕಟಾಕ್ಷವೋ, ಕಣ್ಣಿಗೆ ಮಣ್ಣೆರಚಿಯೋ ಪ್ರತಿನಿತ್ಯ 12,14,18ಚಕ್ರಗಳ ಭಾರೀ ಸರಕು ಲಾರಿಗಳು ಯಾರ ಮುಲಾಜಿಲ್ಲದೇ ವಿಟ್ಲ ಮೂಲಕ ಕೇರಳ ಕರ್ನಾಟಕ ಗಡಿಭಾಗದಿಂದ ರಾಜಾರೋಷವಾಗಿ ಸಂಚರಿಸುತ್ತಿವೆ. ಇದೇ ರಸ್ತೆಯಲ್ಲಿ ಈ ಹಿಂದೆ ಹತ್ತಕ್ಕೂ ಹೆಚ್ಚು ಅಪಘಾತಗಳು ನಡೆದು ಜನಸಾಮಾನ್ಯರು ಹೈರಾಣರಾಗಿದ್ದಾರೆ.
- Advertisement -