- Advertisement -
- Advertisement -
ಬೆಳ್ತಂಗಡಿ: ಭಾರೀ ಮಳೆ ಹಿನ್ನಲೆ ಬೆಳ್ತಂಗಡಿ ಹಾಗೂ ಬಂಟ್ವಾಳ ತಾಲೂಕಿನ ಶಾಲೆಗಳಿಗೆ ಆಯಾಯ ಶಿಕ್ಷಣಾಧಿಕಾರಿಗಳು ತಹಶೀಲ್ದಾರ್ ಗಳ ಸೂಚನೆ ಮೇರೆಗೆ ರಜೆ ಘೋಷಿಸಿದ್ದಾರೆ.
ಆತ್ಮೀಯ ಪೋಷಕರೇ ವಿದ್ಯಾರ್ಥಿಗಳೇ
ಈ ದಿನ ತುಂಬಾ ಮಳೆ ಬರುತ್ತಿರುವ ಕಾರಣ (ರಾತ್ರಿಯೂ ಮಳೆಸುರಿದ ಕಾರಣ) ತೋಡು ಹಳ್ಳ ಕೈಸೇತುವೆಗಳನ್ನು ದಾಟಿ ಶಾಲೆಗೆ ಹಲವಾರು ವಿದ್ಯಾರ್ಥಿಗಳು ಬರುತ್ತಿರುವ ಕಾರಣ ಈ ದಿನ 4-07-2024 ರಂದು ಎಲ್ಲಾ ಸರಕಾರಿ, ಅನುದಾನಿತ, ಅನುದಾನ ರಹಿತ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ ದಯವಿಟ್ಟು ನಿಮ್ಮ ಮಕ್ಕಳನ್ನು ನೀರಿಗೆ ಇಳಿಯದಂತೆ ನೀರಲ್ಲಿ ಆಟವಾಡದಂತೆ ಜಾಗೃತೆವಹಿಸಿ ವಂದನೆಗಳೊಂದಿಗೆ – ತಹಶೀಲ್ದಾರ್/ಬಿ.ಇ.ಒ ಬೆಳ್ತಂಗಡಿ ಎಂದು ಅವರು ಮೆಸೇಜ್ ಮೂಲಕ ಮಾಹಿತಿ ನೀಡಿದ್ದಾರೆ.
ಇನ್ನು ಬಂಟ್ವಾಳ ತಾಲೂಕು ಶಿಕ್ಷಣಾಧಿಕಾರಿಗಳು ಕೂಡ ಇದೆ ರೀತಿ ಮಾಹಿತಿ ನೀಡಿದ್ದಾರೆ.
- Advertisement -