- Advertisement -
- Advertisement -
ಪುತ್ತೂರು: ಪುತ್ತೂರಿನ ವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ ಇಂದು ಆರ್ಎಸ್ಎಸ್ (RSS) ಕರ್ನಾಟಕ ದಕ್ಷಿಣ ಪ್ರಾಂತ ಬೈಠಕ್ ನಡೆಯುತ್ತಿದೆ. ಬೈಠಕ್ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಭಾಗಿಯಾಗಿದ್ದು, ಎಸ್ಕಾರ್ಟ್ ವಾಹನ, ಗನ್ಮ್ಯಾನ್ ಬಿಟ್ಟು ಬೈಠಕ್ಗೆ ಕಟೀಲು ಆಗಮಿಸಿದ್ದಾರೆ.
ಆರ್ಎಸ್ಎಸ್ ಸಹ ಸರಕಾರ್ಯವಾಹಕ ಮುಕುಂದ್ ನೇತೃತ್ವದಲ್ಲಿ ಬೈಠಕ್ ನಡೆಯುತ್ತಿದ್ದು, RSS ಅಖಿಲ ಭಾರತ ಪ್ರತಿನಿಧಿ ಸಭಾದ ಪ್ರಮುಖರು ಸೇರಿದಂತೆ 800 ಜನ ಅಪೇಕ್ಷಿತರು ಆರ್ಎಸ್ಎಸ್ ಬೈಠಕ್ನಲ್ಲಿ ಭಾಗಿಯಾಗಿದ್ದಾರೆ. ಇಂದು ಮತ್ತು ನಾಳೆ ನಡೆಯಲಿರುವ ಬೈಠಕ್ನಲ್ಲಿ ಭಾಗವಹಿಸುವಂತೆ ಬಿಜೆಪಿ ಮತ್ತು ಸಂಘಪರಿವಾರದಿಂದ ಹಲವು ಪ್ರಮುಖರಿಗೆ ಆಹ್ವಾನ ನೀಡಿಲಾಗಿದೆ.
- Advertisement -