- Advertisement -
- Advertisement -
ಬಂಟ್ವಾಳ : ಹುಲ್ಲು ತರಲು ಹೋದ ಮೂವರು ಮಹಿಳೆಯರಿಗೆ ಸಿಡಿಲು ಬಡಿದು ಗಾಯಗಳಾಗಿರುವ ಘಟನೆ ಕೊಡಂಬೆಟ್ಡು ಗ್ರಾಮದಲ್ಲಿ ನಡೆದಿದೆ.
ಕೊಡಂಬೆಟ್ಟು ಗ್ರಾಮದ ಸುಬ್ಬೊಟ್ಟು ನಿವಾಸಿಯಾದ ಅನಿತಾ ಪೂಜಾರಿ ಮತ್ತು ರಾಮಯ್ಯ ಗುರಿ ನಿವಾಸಿಯಾದ ಲೀಲಾವತಿ ಹಾಗೂ ಮೋಹಿನಿ ಎಂಬವರಿಗೆ ಹುಲ್ಲು ತರಲು ಹೋದಾಗ ಸಿಡಿಲು ಬಡಿದಿದೆ. ಗಾಯಗೊಂಡ ಮೂವರು ಬಂಟ್ವಾಳ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಸಿಡಿಲು ಸಹಿತ ಭಾರೀ ಮಳೆಯಿಂದಾಗಿ ತಾಲೂಕಿನ ಹಲವೆಡೆ ಆಸ್ತಿ ಪಾಸ್ತಿಗೆ ಹಾನಿಯಾದ ಬಗ್ಗೆ ವರದಿಯಾಗಿದೆ.
- Advertisement -