ಕೊಡಗು; ಅಕ್ರಮವಾಗಿ ಎರಡು ಹೆಣ್ಣು ಜಿಂಕೆಗಳನ್ನು ಬೇಟೆಯಾಡಿ ಕೊಂದು ತಿಂದ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಬಂಧಿಸಿದ್ದಾರೆ. ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ.
ಕುಶಾಲನಗರ ವಲಯದ ಆನೆಕಾಡು ಶಾಖೆಯ ಅರಣ್ಯಾಧಿಕಾರಿಗಳು ಮತ್ತು ಕುಶಾಲನಗರ ವಲಯದ ರಕ್ಷಣಾ ಕಾರ್ಯದ ಉಪವಲಯ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ, ಅತ್ತೂರು ನಲ್ಲೂರು ಗ್ರಾಮದ ನವೀನ್ ಕರುಂಬಯ್ಯ ರವರಿಗೆ ಸೇರಿದ ಮುನ್ಸಿಫ್ -ಡಿ ಕಾಫಿ ತೋಟದಲ್ಲಿ ಎರಡು ಹೆಣ್ಣು ಜಿಂಕೆಗಳನ್ನು ಬೇಟೆಯಾಡಿ ಮಾಂಸವನ್ನಾಗಿ ಪರಿವರ್ತಿಸಿ ಶೇಖರಿಸಿಟ್ಟಿದ್ದುದನ್ನು ಹಾಗೂ ಜಿಂಕೆಗಳ ಚರ್ಮ, ತಲೆ ಕಾಲುಗಳನ್ನು ಹಾಗೂ ಹೊಟ್ಟೆಯ ಒಳಭಾಗದ ಅಂಗಾಂಗಳನ್ನು ತೋಟದಲ್ಲಿ ಹೂತಿಟ್ಟಿದ್ದುದನ್ನು ಪತ್ತೆಹಚ್ಚಿದ್ದಾರೆ.
ಎರಡು ಜಿಂಕೆಗಳನ್ನು ಬೇಟೆಯಾಡಿದ ಆರೋಪಿಗಳಾದ ಇದೇ ತೋಟದ ಲೈನ್ ಮನೆಯಲ್ಲಿ ವಾಸವಾಗಿರುವ ಗಣೇಶ್ ರವರ ಮಗ ಸುನೀಲ್ (34) ಮತ್ತು ಕೆ.ಎಂ. ದೇವಯ್ಯರವರ ಮಗ ಕೆ..ಡಿ. ಮುತ್ತಣ್ಣ (59) ಎಂಬಿಬ್ಬರನ್ನು ಬಂಧಿಸಿ ವನ್ಯಜೀವಿ ಮೊಕದ್ದಮೆ ಸಂಖ್ಯೆ WLOR 05/2024-25 ನ್ನು ದಾಖಲಿಸಲಾಗಿದೆ. ಮತ್ತೊಬ್ಬ ಆರೋಪಿ ನಾಣಯ್ಯರವರ ಮಗ ಎ.ಎನ್ ಶ್ಯಾಮ್ (50) ಎಂಬಾತ ತಲೆಮರೆಸಿಕೊಂಡಿದ್ದು ಈತನ ಬಂಧಿಸುವ ಕಾರ್ಯ ಪ್ರಗತಿಯಲ್ಲಿದೆ. ಬಂಧಿತ ಆರೋಪಿಗಳಿಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕೊಡಗು; ಅಕ್ರಮವಾಗಿ ಎರಡು ಹೆಣ್ಣು ಜಿಂಕೆಗಳನ್ನು ಬೇಟೆಯಾಡಿ ಕೊಂದು ತಿಂದವರು ಅರೆಸ್ಟ್
- Advertisement -
- Advertisement -
- Advertisement -
