ವಿಟ್ಲ; ದಿನಾಂಕ:21-07-2024 ರಂದು ರಾತ್ರಿ 11.45 ಗಂಟೆಯಿಂದ ದಿನಾಂಕ:22-07-2024 ರಂದು ಬೆಳಿಗ್ಗೆ 07.30 ಗಂಟೆಯ ಮಧ್ಯದ ಅವಧಿಯಲ್ಲಿ ಬಂಟ್ವಾಳ ತಾಲೂಕು ಪುಣಚ ಗ್ರಾಮದ ಗುರ್ಮೆ ಎಂಬಲ್ಲಿರುವ ಗಣೇಶ್ಗೌಡರವರ ಮನೆಯ ಬಳಿಯಿರುವ ಕಟ್ಟಡದಲ್ಲಿ ಸಾರ್ವಜನಿಕರಿಂದ ರಿಪೇರಿಗಾಗಿ ಪಡೆದು ಇರಿಸಿದ್ದ ಅಂದಾಜು 1,81,000/- ರೂ ಮೌಲ್ಯದ ಒಟ್ಟು 16 ಬೋರ್ವೆಲ್ ಪಂಪುಗಳನ್ನು ಯಾರೋ ಕಳ್ಳರೂ ಯಾವುದೋ ವಾಹನದಲ್ಲಿ ಬಂದು ಕಳ್ಳತನ ಮಾಡಿದ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಪತ್ತೆ ಬಗ್ಗೆ ವಿಶೇಷ ತಂಡ ರಚಿಸಿ ತನಿಖೆ ಮಾಡಿದ್ದು ಈ ದಿನಾಂಕ:14-08-2024 ರಂದು ಆರೋಪಿಯಾದ 1] ಮಹಮ್ಮದ್ ಶಾಕೀರ್ ಪ್ರಾಯ:22 ವರ್ಷ. ತಂದೆ: ಉಮರಬ್ಬ. ವಾಸ: ಕೋಚಕಟ್ಟೆ ಮನೆ, ಪೆರಬೆ ಗ್ರಾಮ, ಕಡಬ ತಾಲೂಕು ಎಂಬ ಆರೋಪಿಯನ್ನು ಬಂಧಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ರೂ 1,81,000/–ರೂ ಮೌಲ್ಯದ 16 ಬೊರವೆಲ್ ಪಂಪು ಗಳು , ಹಾಗೂ ಕಳ್ಳತನಕ್ಕೆ ಉಪಯೋಗಿಸಿದ ಕೆಎ-52-ಎ-8164ನೇ ನೊಂದಣಿ ನಂಬ್ರದ ಸುಪರ್ ಕ್ಯಾರಿ ವಾಹನ -01 ಇದರ ಅಂದಾಜು ಮೌಲ್ಯ 2,00,000/- ರೂ ಆಗಿದ್ದು ಇವುಗಳನ್ನು ವಶಪಡಿಸಿಕೊಳ್ಳಲಾಗಿದೆ ಸ್ವಾಧೀನಪಡಿಸಿಕೊಂಡು ಸೊತ್ತುಗಳ ಒಟ್ಟು ಮೌಲ್ಯ- 3,81,000/- ರೂ ಆಗಬಹುದು. ಪ್ರಕರಣದಲ್ಲಿ ಇನ್ನು ಇಬ್ಬರ ಬಂಧನ ಬಾಕಿಯಿದೆ.

ಆರೋಪಿ ಪತ್ತೆಯ ಕಾರ್ಯಾಚರಣೆಯನ್ನು ಬಂಟ್ವಾಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಎಸ್. ವಿಜಯ ಪ್ರಸಾದ್ ರವರ ಮಾರ್ಗದರ್ಶನದಂತೆ ವಿಟ್ಲ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ನಾಗರಾಜ್ ಹೆಚ್ ಈ ರವರ ನಿರ್ದೇಶನದಂತೆ, ಪೊಲೀಸ್ ಉಪ ನಿರೀಕ್ಷಕರಾದ ರತ್ನಕುಮಾರ್ ಎಂ ನೇತ್ರತ್ವದಲ್ಲಿ ಸಿಬ್ಬಂದಿಯಾದ ಉದಯ ರೈ, ರಾಧಾಕೃಷ್ಣ ಕರುಣಾಕರ,ಶ್ರೀಧರ್ ಸಿ ಎಸ್, ಶಂಕರ ಸಂಶಿ,ಗದಿಗಪ್ಪ,ಮನೋಜ್,ಗಣಕಯಂತ್ರ ವಿಭಾಗದ ಸಂಪತ್, ದಿವಾಕರ್, ರವರು ಭಾಗವಹಿಸಿರುತ್ತಾರೆ.