- Advertisement -
- Advertisement -
ಬಂಟ್ವಾಳ: ಇಲ್ಲಿನ ಬಾಳ್ತಿಲ ಗ್ರಾಮದಲ್ಲಿ ಪದವಿ ವಿದ್ಯಾಭ್ಯಾಸ ಮುಗಿಸಿ ಮನೆಯಲ್ಲಿದ್ದ ಮಗನಿಗೆ ‘ಉದ್ಯೋಗ ಮಾಡು’ ಎಂದು ಸಲಹೆ ನೀಡಿದ್ದ ತಂದೆಗೆ ಅವಾಚ್ಯ ಶಬ್ದಗಳಿಂದ ಬೈದು, ದೊಣ್ಣೆಯಿಂದ ಹೊಡೆದ ಘಟನೆ ನಡೆದಿದೆ. ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಗಾಯಗೊಂಡವರು ವಿಶ್ವನಾಥ (56) ಎಂದು ಮಾಹಿತಿ ತಿಳಿದು ಬಂದಿದೆ. ಇವರ ಮಗನಾದ ಹಾರ್ದಿಕ್ ಪದವಿ ವಿದ್ಯಾಭ್ಯಾಸ್ ಮುಗಿಸಿ ಮನೆಯಲ್ಲಿ ಇದ್ದು, ತಂದೆ ಯಾವುದಾದರೂ ಉದ್ಯೋಗ ಮಾಡು ಎಂದು ಸಲಹೆ ನೀಡಿದ್ದರು.
ಈ ವೇಳೆ ಏಕಾಏಕಿ ಮನೆಯಿಂದ ಹೊರಗೆ ಹೋದವನು ಮತ್ತೆ ಮನೆಗೆ ಬಂದು ದೊಣ್ಣೆ ಹಿಡಿದು ತಂದೆಗೆ ಅವಾಚ್ಯ ಶಬ್ದಗಳಿಂದ ಬೈದು, ಎಡಕಾಲಿಗೆ, ಎಡತೋಳಿಗೆ ಹೊಡೆದು ಗಾಯವನ್ನು ಮಾಡಿದ್ದಾನೆ. ಹಾಗೇ ಕೈಯಿಂದ ಬೆನ್ನಿಗೆ ಹೊಡೆದು ಮನೆಯಿಂದ ಹೊರಗೆ ಹೋಗಿದ್ದಾನೆ.
ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
- Advertisement -